ಗುವಾಹಟಿ:- ರಾಮಮಂದಿರ ಉದ್ಘಾಟನೆ ದಿನ ಮುಸ್ಲಿಮರು, ಕ್ರೈಸ್ತರು ಪ್ರಾರ್ಥನೆ ಮಾಡಿ ಎಂದು ಅಸ್ಸಾಂ ಸಿಎಂ ಮನವಿ ಮಾಡಿದ್ದಾರೆ.
ಎಲ್ಲಾ ಜಾತಿ ಮತ್ತು ಸಮುದಾಯದವರು ಶಾಂತಿಯಿಂದ ಇರಲು ನಾಳೆ ವಿಶೇಷ ಪ್ರಾರ್ಥನೆ ಮಾಡಲು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿ ನಾನು ಮನವಿ ಮಾಡುತ್ತೇನೆ. ಇದು ಹಿಂದೂಗಳ ವಿಜಯವಲ್ಲ, ಭಾರತೀಯ ನಾಗರಿಕತೆಯ ವಿಜಯವಲ್ಲ. ಒಂದು ಧರ್ಮದ ಆಕ್ರಮಣಕಾರನು ಭಾರತೀಯ ಪೂಜಾ ಸ್ಥಳವನ್ನು ಒಡೆದ. ಬಾಬರ್ ಆಕ್ರಮಣಕಾರನಾಗಿದ್ದ. ಅವನು ಕೇವಲ ಹಿಂದೂಗಳ ಮೇಲೆ ದಾಳಿ ಮಾಡಲಿಲ್ಲ. ಬ್ರಿಟಿಷ್ ವಸಾಹತುಶಾಹಿ ಮತ್ತು ಬಾಬರ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
1992 ರಲ್ಲಿ ಬಾಬರಿ ಮಸೀದಿಗೂ ಮೊದಲು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಇತ್ತು. 16 ನೇ ಶತಮಾನದ ಮಸೀದಿಯು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಹಳೆಯ ವಿವಾದದ ಕೇಂದ್ರವಾಗಿತ್ತು. ಈ ಸ್ಥಳವು ಭಗವಾನ್ ರಾಮನ ಜನ್ಮಸ್ಥಳವಾಗಿದೆ. ಮುಸ್ಲಿಂ ಆಕ್ರಮಣಕಾರರು ಅಲ್ಲಿರುವ ದೇವಾಲಯವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಿದ್ದರು. ಈಗ ಕೆಡವಲಾದ ಮಸೀದಿಯ ಒಳಗಿನ ಶಾಸನಗಳು ಇದನ್ನು 1528-29 ರಲ್ಲಿ ಮೊಘಲ್ ಚಕ್ರವರ್ತಿ ಬಾಬರ್ನ ಕಮಾಂಡರ್ ಮೀರ್ ಬಾಕಿ ನಿರ್ಮಿಸಿದ ಎಂದು ತಿಳಿಸಿವೆ ಎಂದಿದ್ದಾರೆ.
ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅಂಗಡಿಗಳನ್ನು ಮುಚ್ಚುವಂತೆ ನಾವು ವ್ಯಾಪಾರ ಸಂಸ್ಥೆಗಳಿಗೆ ಮನವಿ ಮಾಡುತ್ತೇವೆ ಎಂದು ಶರ್ಮಾ ಅವರು ಹೇಳಿಕೆ ನೀಡಿದ್ದಾರೆ.