ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಿರುವ ಹಿನ್ನೆಲೆ ಅಯೋಧ್ಯೆಯ ಪ್ರಮುಖ ರಸ್ತೆಗಳು ಹೂವುಗಳು, ಶಿಲ್ಪಕಲೆ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಅಯೋಧ್ಯೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಪುನರ್ನಿರ್ಮಾಣ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ಅಯೋಧ್ಯೆಯ ಧಾಮ್ ಜಂಕ್ಷನ್. ಜನವರಿ 22 ರಾಮ ಮಂದಿರ ಉದ್ಘಾಟನೆಗೆ ಕೂಡಾ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ದೀಪಗಳ ಬೆಳಕಿನಲ್ಲಿ ಹೊಳೆಯುತ್ತಿರುವ ನೀರು.
ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವವರು ಹನುಮಂತನ ಚಿತ್ರವಿರುವ ಕೇಸರಿ ಧ್ವಜಗಳನ್ನು ಮಾರಾಟಕ್ಕೆ ಇಟ್ಟಿದ್ದು ರಸ್ತೆ ಪೂರ್ತಿ ಕೇಸರಿಮಯವಾಗಿ ಕಾಣುತ್ತಿತ್ತು.
ಪ್ರಧಾನಿ ಮೋದಿ ಆಗಮಿಸುವ ರಸ್ತೆಯಲ್ಲಿ ಕೇಸರಿ ಬಣ್ಣದ ಚೆಂಡು ಹೂಗಳಿಂದ ವಿನ್ಯಾಸ ಮಾಡಿದ ಕಳಶವನ್ನು ಅಲಂಕಾರ ಮಾಡಲಾಗಿತ್ತು. ಈ ರಸ್ತೆಗೆ ರಾಮ್ ಪಥ್ ಎಂದು ನಾಮಕರಣ ಮಾಡಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ ಹೂವಿನ ಅಲಂಕಾರದ ಜವಾಬ್ಧಾರಿಯನ್ನು ಲಲಿತ್ ಕುಮಾರ್ ಸಿಂಗ್ ಎಂಬುವವರು ವಹಿಸಿಕೊಂಡಿದ್ದು, ಜನವರಿ 22ಕ್ಕೆ ಈ ರೀತಿಯ ಅಲಂಕಾರ ಇನ್ನಷ್ಟು ಆಕರ್ಷಕವಾಗಿರುತ್ತದೆ ಎಂದಿದ್ದಾರೆ.
2024 ಜನವರಿ 22 ರಂದು ಗುರುವಾರ ನಡೆಯಲಿರುವ ರಾಮ ಮಂದಿರದ ಮಹಾಭಿಷೇಕ ಸಮಾರಂಭದ ಪೂರ್ವ ಸಿದ್ಧತೆಯ ಭಾಗವಾಗಿ ವಿಷ್ಣು ಶಂಖ್ ತಂಡವು ಈಗಾಗಲೇ ಅಯೋಧ್ಯೆಗೆ ತಲುಪಿದೆ.