ವಿಜಯಪುರ: ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ವಿಜಯಪುರದಲ್ಲಿ ರಾಮ ಭಕ್ತರಿಂದ ವಿಶೇಷ ಅಭಿಯಾನ ಮಾಡಲಾಗಿದೆ. ನಗರದ ಜೋರಾಪುರ ಪೇಟ್, ಅಡಕಿ ಗಲ್ಲಿಗಳಲ್ಲಿ ಜೈ ಶ್ರೀರಾಮ್ ಸೀಲ್ ಅಭಿಯಾನ ಮಾಡಿದ್ದಾರೆ. ಪ್ರತಿ ಮನೆಯ ಗೋಡೆಗಳಿಗೆ ರಾಮ ಭಕ್ತರು ಜೈ ಶ್ರೀ ರಾಮ್ ಸೀಲ್ ಹಾಕ್ತಿದ್ದಾರೆ.
200 ಮನೆಗಳಿಗೆ ಜೈ ಶ್ರೀರಾಮ್ ಕೇಸರಿ ಬಣ್ಣದ ಸೀಲ್ ಹಾಕಲಾಗಿದ್ದು, ಜೊತೆಗೆ ಮನೆಮನೆಗು ರಾಮ ಮಂದಿರದ ಅಕ್ಷತೆ ವಿತರಣೆ ಮಾಡಿದ್ದಾರೆ. ರಾಮ ನಾಮ ಸೀಲ್ ಹಾಕೋಕೆ ರಾಮ ಭಕ್ತರನ್ನ ಆಹ್ವಾನಿಸ್ತಿರೋ ಸಾರ್ವಜನಿಕರು.