ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಅನಂತಕುಮಾರ್ ಹೆಗಡೆ ಹಾಕಿರುವ ಸವಾಲಿನ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ನಮ್ಮ ಹೆಸರನ್ನು ದಿನಕ್ಕೆರಡು ಬಾರಿ ಹೇಳದಿದ್ದರೆ ಅವರು ತಿಂದ ಊಟ ಜೀರ್ಣವೂ ಆಗಲ್ಲ ಎಂದು ಕಿಡಿಕಾರಿದ್ದಾರೆ
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೌದೋ ಅಲ್ಲವೋ ಹೈಕಮಾಂಡ್ ನಿರ್ಧರಿಸುತ್ತೆ: ಜಿ.ಪರಮೇಶ್ವರ್
ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡಲಿಲ್ಲ ಅಂದ್ರೆ ರಾತ್ರಿ ನಿದ್ದೆಯೂ ಬರಲ್ಲ. ಅವರಿಗೆ ನಾವು ಮೂರು ಜನ ಮನೆ ದೇವರಂತಾಗಿದ್ದೇವೆ. ಕೆಲವು ನಾಯಕರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದರೆ ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಟೀಕೆ ಮಾಡಬೇಕಿದೆ ಎಂದು ಹೇಳಿದರು.
ಅನಂತಕುಮಾರ್ ಹೆಗಡೆ ಕಳೆದ ನಾಲ್ಕೂವರೆ ವರ್ಷ ಎಲ್ಲಿದ್ದರು ಎಂದು ನಮಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಅವರು ಕೌಶಲ್ಯಭಿವೃದ್ಧಿ, ಉದ್ಯಮ ಇಲಾಖೆ ಸಚಿವರಾಗಿದ್ದರು. ಅವರು ನಮ್ಮ ರಾಜ್ಯದಲ್ಲಿ ಬೇಡ, ಅವರ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಿಸಿದ್ದಾರೆ ಎಂದು ಹೇಳಲಿ ಎಂದರು.
ಎಷ್ಟು ನವೋದ್ಯಮಕ್ಕೆ ಬೆಂಬಲ ನೀಡಿದ್ದಾರೆ. ಅವರು ಆಂಥ್ರೋಪ್ರನಾರ್ ಶಿಪ್ ಸ್ಪೆಲ್ಲಿಂಗ್ ಹೇಳಲಿ ಸಾಕು. ಅವರು ನಮ್ಮ ನಾಯಕರ ಬಗ್ಗೆ ಏನುಬೇಕಾದರೂ ಮಾತನಾಡಬಹುದು, ನಾವು ಅವರ ಬಗ್ಗೆ ಮಾತನಾಡಬೇರದೇ? ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಏನು ತಂದಿದ್ದಾರೆ? ಬರ ಸೇರಿದಂತೆ ರಾಜ್ಯದ ವಿಚಾರವಾಗಿ ಎಂದಾದರೂ ಧ್ವನಿ ಎತ್ತಿದ್ದಾರಾ? ಸಂಸತ್ತಿನಲ್ಲಿ ಎಂದಾದರೂ ರಾಜ್ಯದ ವಿಚಾರವಾಗಿ ಮಾತನಾಡಿದ್ದಾರಾ? ಪರೇಶ್ ಮೇಸ್ತಾ ಬಗ್ಗೆ ಮಾತನಾಡಿಲ್ಲ ಏಕೆ? ಆ ಪ್ರಕರಣ ಏನಾಯ್ತು? ಆತನ ಹೆಸರು ಹೇಳಿಕೊಂಡೆ ಅವರು ಚುನಾವಣೆ ಗೆದ್ದಿದ್ದು ಅಲ್ಲವೇ? ಆಗ ಆತನ ಹೆಸರು ಹೇಳುತ್ತಿಲ್ಲ ಯಾಕೆ? ಇಂತಹವರನ್ನು ರಾಮಭಕ್ತರು ಎಂದು ಹೇಳುತ್ತೀರ?” ಎಂದು ಕೇಳಿದರು.