ಕಲಬುರಗಿ: ನೆರೆ ಹಾವಳಿ ಉಂಟಾದಾಗ ರಕ್ಷಣಾ ಕಾರ್ಯಾಚರಣೆ ಹೇಗೆ ಮಾಡಬೇಕು ಎನ್ನುವ ಕುರಿತ ಅಣಕು ಪ್ರದರ್ಶನ ಇವತ್ತು ಕಲಬುರಗಿಯಲ್ಲಿ ನಡೆಯಿತು..ಮಹಾಗಾಂವ್ ಸಮೀಪದ ಕುರಿಕೋಟಾ ಹಿನ್ನೀರಿನಲ್ಲಿ ಜಿಲ್ಲಾಡಳಿತ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.. ಬೆಣ್ಣೆತೊರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿ ನೆರೆಹಾವಳಿ ಎದುರಾದಾಗ
ಕೈಗೊಳ್ಳಬೇಕಾದ,
ಪರಿಹಾರ ಕಾರ್ಯಗಳ ಕುರಿತಂತೆ ಅಣಕು ಪ್ರದರ್ಶನ ವೇಳೆ ತಿಳಿಸಲಾಯಿತು.ಜನರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವುದು, ಅಂಬುಲೆನ್ಸ್, ವೈದ್ಯಕಿಯ ಚಿಕಿತ್ಸೆ, ಊಟೋಪಚಾರ ರಕ್ಷಣಾ ಕಾರ್ಯಗಳು ಹೀಗೆ ಎಲ್ಲ ವಿಚಾರವನ್ನ ತಿಳಿಸಲಾಯಿತು..ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.