ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು ನೂರಾರು ಮಹಿಳಾ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ,
ತ್ರಿಬಲ್ ರೈಡಿಂಗ್ ವಾಹನ ಸವಾರರಿಗೆ ಪೋಲೀಸರು ಫೈನ್ ಹಾಕ್ತಾರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 50 -60 ಟನ್ ತೂಕದ ಕಲ್ಲು ಎಂ.ಸ್ಯಾಂಡ್ ಹಾಕೊಂಡು ಹೋಗೋ ಲಾರಿಗೆ ದಂಡ ಹಾಕಲ್ಲ ಎಂದು ರೈತರ ಆರೋಪ
ಕಾರಣ ಕೇಳಿದ್ರೆ ಪೋಲೀಸರು ಹಾಗೂ ಆರ್.ಟಿ.ಓ. ಅಧಿಕಾರಿಗಳಿಗೆ ಲಂಚ ಕೇಳ್ತಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಚ ಹೊನ್ನೂರು ಪ್ರಕಾಶ್ ಗಂಭೀರ ಆರೋಪ ಮಾಡಿದ್ದು ಹಾಗಾಗಿ ಬೇಗೂರು ಗ್ರಾಮದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಮಾನಸ ಸರಪಳಿ ನಿರ್ಮಿಸಿ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ
ಸರ್ಕಾ ಅಧಿಕಾರಿಗಳಿಂದ ರೈತರಿಗೆ ನಿರಂತರ ಕಿರುಕುಳ ಎಲ್ಲಾ ಇಲಾಖೆಗಳಲ್ಲೂ ರೈತರಿಗೆ ಬಡವರಿಗೆ ಅನ್ಯಾಯ ಬರಗಾಲದಲ್ಲಿ ಬ್ಯಾಂಕುಗಳಲ್ಲಿ ಸಾಲ ಕಟ್ಟುವಂತೆ ರೈತರಿಗೆ ಕಿರುಕುಳ ನೋಟಿಸ್ ಮೂಲಕ ಬ್ಯಾಂಕ್ ಅಧಿಕಾರಿಗಳ ಬೆದರಿಕೆ ತಂತ್ರ ಹೊನ್ನೂರು ಪ್ರಕಾಶ್ ಆರೋಪ ಹಾಗೆ ರೈತರ ರಕ್ಷಣೆಗೆ ಬರುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಪ್ರತಿಭಟನೆಯಲ್ಲಿ ನೂರಾರು ಮಹಿಳಾ ರೈತರು ಭಾಗಿಯಾಗಿದ್ದರು.