ಪ್ರಸಕ್ತ ಸಾಲಿನಲ್ಲಿ ಯುವಜನರ ಆಲೋಚನೆ ಬದಲಾಗಿದೆ. ಹನಿಮೂನ್ ಪ್ರಸಿದ್ಧಿ ಸ್ಥಳಗಳಲ್ಲಿ ಜನರ ಸಂಖ್ಯೆ ಹೆಚ್ಚು. ಇದ್ರಿಂದ ಒಬ್ಬರನ್ನೊಬ್ಬರು ಅರಿಯೋದು ಕಷ್ಟ ಎನ್ನುವ ಸತ್ಯವನ್ನು ಯುವಜನತೆ ಅರಿತಿದ್ದಾರೆ. ಯುವಜನರ ಹನಿಮೂನ್ ಸ್ಫಾಟ್ ಈಗ ಬದಲಾಗಿದೆ. ನಾಡಿನಿಂದ ಕಾಡಿಗೆ ಹೋಗಲು ಯುವಜೋಡಿ ಹೆಚ್ಚು ಇಷ್ಟಪಡ್ತಿದ್ದಾರೆ.
ಭಾರತ ಪ್ರವಾಸೋದ್ಯಮ 2022 ಮಾಹಿತಿ ವರದಿಯಲ್ಲೂ ಇದೇ ವಿಷ್ಯವನ್ನು ಉಲ್ಲೇಖಿಸಲಾಗಿದೆ. ಈಗ ಹೆಚ್ಚಿನ ಜನರು ಪ್ರವಾಸೋದ್ಯಮ ಕ್ಕಾಗಿ ಪ್ರಕೃತಿಯ ನಡುವೆ ಹೋಗಲು ಬಯಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಾಡು ಜನರ ಅತ್ಯುತ್ತಮ ಹನಿಮೂನ್ ಜಾಗವಾಗಲು ಕಾರಣವೇನು ಎಂಬ ವರದಿ ಇಲ್ಲಿದೆ.
ಕಾಡು ಹನಿಮೂನ್ ಸ್ಪಾಟ್ ಆಗಲು ಇದೇ ಕಾರಣಗಳು!
* ಶಾಂತ ವಾತಾವಣ
*ಜಂಗಲ್ ಸಫಾರಿಗೆ ಹೆಚ್ಚಿದ ಕ್ರೇಜ್
*ರೆಸಾರ್ಟ್ ನಲ್ಲಿ ಹೊಸ ಜೀವನದ ಆನಂದ
*ಸೆಲೆಬ್ರಿಟಿಗಳಿಂದ ಪ್ರೇರಣೆ
ಶಾಂತ ವಾತಾವಣ : ಶುದ್ಧ ವಾತಾವರಣ ಹಾಗೂ ಶಾಂತ ಸ್ಥಳವನ್ನು ಅರಸುವ ಜೋಡಿ ಕಾಡಿನತ್ತ ಮುಖ ಮಾಡ್ತಾರೆ. ಕಾಡಿನ ವಾತಾವರಣ ಶಾಂತವಾಗಿರುವ ಕಾರಣ ಅವರು ಗುಣಮಟ್ಟದ ಸಮಯವನ್ನು ಕಳೆಯಬಹುದು.
ಜಂಗಲ್ ಸಫಾರಿಗೆ ಹೆಚ್ಚಿದ ಕ್ರೇಜ್ : ಮದುವೆಯ ಆಯಾಸವನ್ನು ಹೋಗಲಾಡಿಸಿ, ಹನಿಮೂನ್ನ ಸುಂದರ ಕ್ಷಣವನ್ನು ಸವಿಯಲು ಪ್ರಕೃತಿ ಉತ್ತಮ ಸ್ಥಳವಾಗಿದೆ. ಹನಿಮೂನ್ ಸದಾ ನೆನಪಿನಲ್ಲಿರಲಿ ಎನ್ನುವ ಕಾರಣಕ್ಕೆ ಯುವ ಜೋಡಿ ಸಾಹಸಕ್ಕೆ ಕೈ ಹಾಕುತ್ತಾರೆ
ರೆಸಾರ್ಟ್ ನಲ್ಲಿ ಹೊಸ ಜೀವನದ ಆನಂದ : ಪ್ರಕೃತಿ ಮಧ್ಯೆ ಹೊಸ ಜೀವನ ಶುರು ಮಾಡುವುದರ ಸಂತೋಷ ಭಿನ್ನವಾಗಿರುತ್ತದೆ. ಜಂಗಲ್ ರೆಸಾರ್ಟ್, ನವ ದಂಪತಿಯನ್ನು ಆಕರ್ಷಿಸುತ್ತಿದೆ. ಇದ್ರಿಂದ ಭಾರತೀಯ ಪ್ರವಾಸೋದ್ಯಮಕ್ಕೂ ಲಾಭವಾಗ್ತಿದೆ.
ಸೆಲೆಬ್ರಿಟಿಗಳಿಂದ ಪ್ರೇರಣೆ : ಸೆಲೆಬ್ರಿಟಿಗಳು ಮಾಡಿದ ಕೆಲಸಕ್ಕೆ ಅನೇಕರು ಪ್ರೇರಿತರಾಗ್ತಾರೆ. ಈಗಿನ ದಿನಗಳಲ್ಲಿ ಸೆಲೆಬ್ರಿಟಿಗಳು ಕೂಡ ಕಾಡಿನತ್ತ ಮುಖ ಮಾಡಿದ್ದಾರೆ.