ಗದಗ:- ಗದಗದಿಂದ ನಟ ಯಶ್ ವಾಪಸ್ ಆಗುವಾಗ ಮತ್ತೊಂದು ಅವಘಡ ಸಂಭವಿಸಿದೆ. ಕಟೌಟ್ ನಿಲ್ಲಿಸೋ ವೇಳೆ ಕರೆಂಟ್ ಶಾಕ್ನಿಂದ ಮೂವರು ಯಶ್ ಅಭಿಮಾನಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಆಗಮಿಸಿ ವಾಪಸ್ ತೆರಳುವ ವೇಳೆ ಮತ್ತೊಂದು ದುರ್ಘಟನೆ ನಡೆದಿದೆ.
ಅವರ ಹಿಂದಿದ್ದ ಪೊಲೀಸ್ ವಾಹನ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಹೊಡೆದಿದ್ದರಿಂದಾಗಿ ಸ್ಕೂಟಿ ಪೇರ್ ಪಾರ್ಟ್ಸ್ ಪುಡಿಪುಡಿಯಾಗಿವೆ.
ಸ್ಕೂಟಿ ಮೇಲೆ ಯಶ್ ನೋಡಲು ಯುವಕನು ಬಂದಿದ್ದ ಎನ್ನಲಾಗಿದೆ, ರಸ್ತೆ ಕ್ರಾಸ್ ಮಾಡುವ ವೇಳೆ ಈ ಗದಗನ ತೇಜಾ ನಗರದ ಬಳಿ ಈ ದುರ್ಘಟನೆ ನಡೆದಿದೆ.ಈಗ ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.