ಬೆಳಗಾವಿ: ಬೆಳಗಾವಿಯಲ್ಲಿ ಮುಸ್ಲಿಮ್ರ ಗೂಂಡಾಗಳ ನೈತಿಕ ಪೊಲೀಸಗಿರಿ ಆಶ್ಚರ್ಯ ಮತ್ತು ನೋವು ತಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಬಾಣಿ ಯವಕ ಮುಸ್ಲಿಮ್ ಯುವತಿಯ ತಾಯಿ ಮೊದಲು ಲಂಬಾಣಿ ಇದ್ದವರು, ಈಗ ಮತಾಂತರವಾಗಿದ್ದಾರೆ. ಮುಸ್ಲಿಮ್ ಯುವತಿ ಅಕ್ಕ, ಹಿಂದೂ ಯುವಕ ತಮ್ಮ. ಯುವನಿಧಿ ಅರ್ಜಿ ಹಾಕಲು ಹೋದಾಗ ದಾಖಲಾತಿ ಸಲುವಾಗಿ ಕಿಲ್ಲಾ ಕೆರೆಯ ಆವರಣದಲ್ಲಿ ಕುಳಿತಿದ್ದಾಗ. ಮುಸ್ಲಿಮ್ ಗೂಂಡಾಗಳು ಹಲ್ಲೆ ಮಾಡಿದ್ದಾರೆ ಎಂದರೆ ಕರ್ನಾಟಕ ಸರಕಾರ ಬದುಕಿದೆಯೋ ಸತ್ತಿದೆಯೋ ಎಂದು ಪ್ರಶ್ನಿಸಿದರು.
ಗೃಹ ಸಚಿವ ಪರಮೇಶ್ವರ ಹಾಗೂ ಸಚಿವ ಕೆ.ಜೆ. ಜಾರ್ಜ್ ರಾಜ್ಯದಲ್ಲಿ ನೈತಿಕ ಪೊಲೀಸಗಿರಿ ಮಾಡಲು ಬಿಡುವುದಿಲ್ಲ ಎನ್ನುತ್ತಾರೆ. ಈಗೇನು ಹೇಳುತ್ತಾರೆ ಎಂದ ಅವರು, ಬೆಳಗಾವಿಯಲ್ಲಿ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಸಿಎಂ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಬಳಿ ನಾನು ಮನವಿ ಮಾಡುತ್ತೇನೆ. ಒಂದು ತನಿಖಾ ದಳ ಬೆಳಗಾವಿಗೆ ಕಳಿಸಿ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಸರಕಾರ ಪೊಲೀಸರ ಮೇಲೆ ಹಾಕಿ ಸುಮ್ಮನೆ ಕೂರೋದು ಸರಿಯಲ್ಲ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿ ಬೇಲ್ ಪಡೆದರೆ ಮತ್ತೆ ಇಂಥ ಘಟನೆಯಾಗುತ್ತವೆ. ಸುಮಾರು ೭೦ ರಿಂದ ೮೦ ಜನರಿಗೆ ಇದೆ ರೀತಿ ಹೊಡೆದಿದ್ದೆವೆ ಎಂದು ಆರೋಪಿಗಳು ಹೇಳಿದ್ದಾರೆ. ಅದಕ್ಕಾಗಿಯೇ ಅವರೊಂದು ರೂಮ್ ಸಹ ಮಾಡಿಕೊಂಡಿದ್ದಾರೆ. ಇನ್ನುಂದೆ ಇಂತಹ ಘಟನೆಗಳು ಆಗಬಾರದು ಎಂದರು.
ಹಲ್ಲೆಗೊಳಗಾದ ಯುವಕನಿಗೆ ೨.೫ ಲಕ್ಷ ಕೊಡ್ತಿವಿ ಅಂತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.ಯುವಕ, ಯುವತಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರಕಾರ ಒದಗಿಸಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಹಿAದುತ್ವದ ಪರವಾಗಿ ಎಲ್ಲ ಬಿಜೆಪಿ ನಾಯಕರ ನಿಲುವು ಒಂದೇ ಇದೆ. ಆದರೆ ಗಟ್ಟಿ ಧ್ವನಿ ಎತ್ತಲು ರಾಜ್ಯ ಬಿಜೆಪಿಯಲ್ಲಿ ಎಲ್ಲರೂ ಬಸನಗೌಡಾ ಪಾಟೀಲ ಯತ್ನಾಳ ಹಾಗೂ ಕೆ.ಎಸ್.ಈಶ್ವರಪ್ಪ ಆಗಲು ಸಾಧ್ಯವಿಲ್ಲ. ಬಿಜೆಪಿಯ ನಿಲುವು ಎಲ್ಲರದ್ದೂ ಒಂದೇ ಆಗಿದೆ. ಬೆಳಗಾವಿ ಘಟನೆ ನೋಡಿದಾಗ ಬೆಳಗಾವಿ ವ್ಯವಸ್ಥೆ ಸತ್ತು ಹೋಗಿದೆಯಾ. ಪ್ರಕರಣ ಬೆಳಕಿಗೆ ಬಂದಿದರೂ ಪೊಲೀಸರು ಹಲ್ಲೆಗೊಳಗಾದ ಯುವಕ, ಯುವತಿಗೆ ದೈರ್ಯ ಹೇಳಿದ್ದಾರಾ ಎಂದು ಪ್ರಶ್ನಿಸಿದ ಅವರು, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಮ್ರ ಮತಕ್ಕಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕಾನೂನು ಸುವ್ಯವಸ್ಥೆ ಹಾಳಾಗಲಿ ಎಂದು ಸುಮ್ಮನೆ ಕುಳಿತಿದ್ದಾರೆ. ಹಿಂದು ಯುವಕರಿಗೆ ತೊಂದರೆಯಾದರೂ ಪರವಾಗಿಲ್ಲ ಎನ್ನುವ ಭಾವನೆಯಲ್ಲಿದೆ ರಾಜ್ಯ ಸರಕಾರ. ಇವರದ್ದು ಕೆಡಗಾಲ ಬಂದಿದೆ. ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ವಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ ೪೬ ಜನ ಬಿಜೆಪಿ ಮುಖಂಡರ ಮೇಲಿನ ಪ್ರಕರಣ ದಾಖಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರ ಮೇಲೆ ಕಾಂಗ್ರೆಸ್ ಬೇಕಾಷ್ಟು ಪ್ರಕರಣ ದಾಖಲಿಸಲಿ. ಜಯಪ್ರಕಾಶ ನಾಯರಾಣ ನೇತೃತ್ವದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟ ಮಾಡಿದ್ದೇವು. ಅಂದಿನ ಪ್ರಕರಣ ತೆಗೆದು ನಮ್ಮ ಮೇಲೆ ಮತ್ತೊಮ್ಮೆ ಪ್ರಕರಣ ದಾಖಲಿಸಲಿ. ನಮ್ಮದ್ದು ನ್ಯಾಯದ ಪರವಾಗಿ ಹೋರಾಟ ಇದೆ. ಶ್ರೀಕಾಂತ ಪೂಜಾರಿ ಮೇಲೆ ೧೬ ಪ್ರಕರಣ ಇದೆ ಎನ್ನುತ್ತಾರೆ. ಆದರೆ ಅವರ ಮೇಲೆ ಇದ್ದಿದ್ದು, ಒಂದು ಮಾತ್ರ. ನ್ಯಾಯಾಲಯ ಜಾಮೀನು ನೀಡಿದೆ ಎಂದರು.