ತುಮಕೂರು:- ಹಾಸನ ಎಸ್ಪಿ ಅವರ ತಾಯಿ ಸಂಚರಿಸುತಿದ್ದ ಕಾರು ಹಿಟ್ ಆ್ಯಂಡ್ ರನ್ ಆಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದೀಗ ಘಟನೆ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ.
ಹೌದು, ಹಾಸನ ಎಸ್ಪಿ ಅವರ ತಾಯಿ ಪ್ರಯಾಣಿಸುತಿದ್ದ ಕಾರು!? ಪಾದಾಚಾರಿಗೆ ಗುದಿತ್ತಾ ಎಂಬ ಪ್ರಶ್ನೆ ಮೂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ತಾಯಿ, ಇಲ್ಲ…ನಾವು ಅಪಘಾತ ಮಾಡಿಲ್ಲ.. ಗಾಯಾಳುವಿನ ರಕ್ಷಣೆಗೆ ಬಂದಿದ್ವಿ… ರಕ್ಷಣೆಗೆ ಬಂದ ನಮ್ಮ ಮೇಲೆಯೇ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.
ಈ ಕುಣಿಗಲ್ ಪಟ್ಟಣದ ಬಿದನಗೆರೆ ಗ್ರಾಮದ ಬಳಿ ಘಟನೆ ಜರುಗಿದೆ. ಪಾದಾಚಾರಿ ಕುಮಾರ್ ಎನ್ನುವವರಿಗೆ ಕಾರು ಗುದ್ದಿದ ಆರೋಪ ಕೇಳಿ ಬಂದಿದೆ. ಅಪಘಾತ ನಡೆದ ಬಳಿಕ ಎಸ್ಕೇಪ್ ಆಗಲು ಪ್ರಯತ್ನಿದ್ದಾಗ ಊರಿನವರು ಅಡ್ಡಹಾಕಿ ತಡೆದ ಆರೋಪ ಕೇಳಿ ಬಂದಿದ್ದು, ಕಾರು ಅಡ್ಡಹಾಕಿದ ಪರಿಣಾಮ ಪರಸ್ಪರ ಎರಡೂ ಕಡೆಯವರ ನಡುವೆ ಗಲಾಟೆ ಶುರುವಾಗಿದೆ..
ಅಪಘಾತದಲ್ಲಿ ಗಾಯಗೊಂಡ ಕುಮಾರ್ ಸೇರಿದಂತೆ ಚಂದ್ರಪ್ಪ, ನಾಗಣ್ಣ ಒಟ್ಟು ನಾಲ್ಕು ಮಂದಿ ಮೇಲೆ ಕೊಲೆ ಯತ್ನ ಕೇಸ್ ದಾಖಲಾಗಿದೆ. ಕಾರು ತಡೆದು ಗಲಾಟೆ ಮಾಡಿದ್ದಕ್ಕೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಅತ್ತ ಎಸ್ಪಿ ತಾಯಿ ಅಜೀಜಾ, ಚಾಲಕ ಅಬ್ದುಲ್, ಸಹೋದರ ಹಸನ್ ಅಲಿ ಶೇಖ್ ಸೇರಿ ಐದು ಜನರ ಮೇಲೂ ದೂರು ನೀಡಿದ್ದಾರೆ.
ಘಟನೆ ಸಂಬಂಧ ಪರಸ್ಪರ ದೂರು-ಪ್ರತಿ ದೂರು ದಾಖಲಿಸಿಕೊಂಡಿದ್ದಾರೆ. ಹಾಸನದ ಎಸ್ಪಿ ಅವರ ತಾಯಿ ಎಂಬ ಕಾರಣಕ್ಕೆ ಕೇಸ್ ನ್ನೇ ಉಲ್ಟಾ ಮಾಡಿದ್ದಾರೆ ಎಂದು ಕುಣಿಗಲ್ ಪೊಲೀಸರು ಎಂದು ಆರೋಪ ಮಾಡಿದ್ದಾರೆ. ತಮಿಳುನಾಡು ನೋಂದಣಿಯ TN 11, BF 1492 ಸಂಖ್ಯೆಯ ಕಾರು ಎಂದು ಹೇಳಲಾಗಿದೆ.