ಹುಬ್ಬಳ್ಳಿ; ಭಾರತದ ಭವ್ಯತೆ, ಪ್ರಮುಖ ವಿಚಾರಗಳ ಏಕತೆ , ಶೈಲಿಗಳು ಮತ್ತು ವೇಷಭೂಷಣಗಳನ್ನು ಪ್ರತಿಬಿಂಬಿಸುವ ಪ್ರದರ್ಶನ ಕಲೆ ಶಾಸ್ತ್ರೀಯ ನೃತ್ಯ. ನೃತ್ಯದ ಮೂಲಕ ನಮ್ಮ ಸನಾತನ ಧರ್ಮದ ಇತಿಹಾಸ, ಸುಂದರ ಸಂಸ್ಕಾರವನ್ನು ಪ್ರತಿಪಾದಿಸುತ್ತಾ ಕಲಾ ಸೇವೆಯ ಹಾದಿಯಲ್ಲಿ ನಡೆದುಬಂದ ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯ ಅತಿ ನಿರೀಕ್ಷಿತ ನೃತ್ಯೋಸ್ವವ ಮಯೂರೋತ್ಸವ 2023 ಸೋಮವಾರ ಡಿಸೆಂಬರ್ ೨೫ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ವೈಭವದಿಂದ ಮೂಡಿ ಬಂದಿತು. ಸುಮಾರು 400 ಜನ ನೃತ್ಯ ಪಟುಗಳ ಕಿಂಕಿಣಿಗಳ ನಾದ, ನಿನಾದ, ಅವರ ಹಾವಭಾವನೆಗಳಿಂದ ಗಂಧರ್ವ ಲೋಕವನ್ನೇ ಪ್ರತಿಬಿಂಬಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ ಹಾಗೂ ಖ್ಯಾತ ಉದ್ಯಮಿಗಳಾದ ಶ್ರೀಯುತ ಅನಂತಪದ್ಮನಾಭ ಐತಾಳ ಅವರು ಆಗಮಿಸಿದ್ದರು.
ಪ್ರಖ್ಯಾತ ಇತಿಹಾಸ ತಜ್ಞರಾದ ಡಾ. ಕರುಣಾ ವಿಜಯೇಂದ್ರ ಅವರನ್ನು ಮಯೂರ ಪುರಸ್ಕಾರದಿಂದ ಸತ್ಕರಿಸಲಾಯಿತು.
ಸನ್ಮಾನಿತರಾದ ಮಹೇಶ ಟೆಂಗಿನಕಾಯಿಯವರು ಶಾಸ್ತ್ರೀಯ ಸಂಗೀತ ಹಾಗೂ ನೃತ್ಯದ ಬಾಗೆ ಮಾತದಿದ್ದಲ್ಲಿ ಡಾ.ಕರುಣಾ ವಿಜಯೇಂದ್ರರವರು ಉತ್ತರ ಕರ್ನಾಟಕದ ಮಕ್ಕಳಲ್ಲಿ ಶಾಸ್ತ್ರೀಯ ನೃತ್ಯವನ್ನು ಕಲಿಯುವ ಆಸಕ್ತಿ ಹಾಗೂ ಕರ್ನಾಟಕದ ಸಂಸ್ಕೃತಿಯನ್ನು ಉದ್ದೇಶಿಸಿದರು. ಹಾಗೆ ಅನಂತಪದ್ಮನಾಭ ಐತಾಳ ಅವರು ವಿದ್ಯೆ ಎಂದಿಗೂ ಶಾಶ್ವತವೆಂಬುದನ್ನು ಎತ್ತಿ ಹಿಡಿದರು.
ಪ್ರಾಸ್ತಾವಿಕ ನುಡಿಗಳೊಂದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಯೂರ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವಿದುಷಿ ಶ್ರೀಮತಿ ಹೇಮಾ ವಾಘ್ಮೋಡೆಯವರು ಮಕ್ಕಳಲ್ಲಿ ನೃತ್ಯ ಕಲಿಕೆಯ ಬಗ್ಗೆ ಮನದಟ್ಟಾಗುವಂತೆ ಮಾತನಾಡಿದರು.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ವಿದ್ವತ್ ಪೂರ್ಣ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಸಹ ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಮಯೂರ ನೃತ್ಯ ಅಕಾಡೆಮಿಯ ವಿದ್ಯಾರ್ಥಿನಿಯರು ನೃತ್ಯದ ಮೂಲಕ ಪ್ರದರ್ಶಿಸಿದ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ನೃತ್ಯ ರೂಪಕವು ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಜನ ಮನವನ್ನು ಸೆಳೆಯುವಂತಾಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.