ಬೆಂಗಳೂರು ಗ್ರಾಮಾಂತರ: ಎರಡನೇ ತಿರುಪತಿ ಅಂತಾನೇ ಪ್ರಸಿದ್ಧಿ ಪಡೆದಿರುವ ಶ್ರೀ ದೇವಿಸಮೇತ ಶ್ರೀ ರಂಗನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಅಲಂಕಾರ,ಪೂಜೆ ಸಂಭ್ರಮ. ನೆಲಮಂಗಲ ಹೊರಹೊಲಯದ ದಾಸನಪುರ ದಲ್ಲೂ ಕಳೆಗಟ್ಟಿದ ಏಕಾದಶಿ ಸಂಭ್ರಮ ಕಳೆಗಟ್ಟಿದೆ
ಹೀಗಾಗಿ ಇಂದು ಮತ್ತು ನಾಳೆ ದ್ವಾದಶಿಗೆ ವಿಶೇಷ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತಿದೆ. ಸನ್ನತದಾಸ ಮಹಾರಾಜರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಲಿದ್ದು ಲಕ್ಷ್ಮಿ ಪದ್ಮಾವತಿ ದೇವಿಗೆ ಸಹಸ್ರ ಅರ್ಚನ ನೆರವೇರಲಿದೆ.ಈ ಉತ್ಸವ ಕಣ್ತುಂಬಿಕೊಳ್ಳಲು ಆಗಮಿಸೋ ಭಕ್ತರಿಗೆ ಲಡ್ಡು ಪ್ರಸಾದ ನೀಡಲು ದೇಗುಲ ಸಮಿತಿ ತಯಾರಾಗಿದೆ.. ಕ್ಷೀರ ಸಾಗರ ಯೋಗ ಮುದ್ರೆಯ ಶೇಷಸಾಯಿ ಮೇಲೆ ಶಯನಿಸಿದ ಶ್ರೀಹರಿಯು ಎದ್ದೇಳಿದ ದಿನವೇ ಏಕಾದಶಿ ಅನ್ನೋದು ವಿಶೇಷ..