ಮಂಡ್ಯ:ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್ಡಿ ಕುಮಾರಸ್ವಾಮಿ ತನ್ನ ಮಗನಿಗೆ ಟಿಕೆಟ್ ನೀಡಿ, ನನ್ನನ್ನು ಸಾಲಗಾರನ್ನಾಗಿ ಮಾಡಿದರು ಎಂದು ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಬೇಸರವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ವಾಗ್ದಾಳಿ ನಡೆಸಿದರು. ” ಎಂಪಿ ಚುನಾವಣೆಯಲ್ಲಿ ನನಗೆ ಕೇವಲ 6 ತಿಂಗಳು ಎಂಪಿ ಮಾಡಿದರು. ಆ ಬಳಿಕ ಮಗನಿಗೆ ಟಿಕೆಟ್ ನೀಡಿ ನನನ್ನು ದೊಡ್ಡ ಸಾಲಗಾರನಾಗಿ ಮಾಡಿದರು ” ಎಂದು ಆರೋಪಿಸಿದ್ದಾರೆ.
Winter Health: ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು ಸಮಸ್ಯೆಯೇ?: ಈ ವಸ್ತುಗಳನ್ನ ತಯಾರಿಸಿ ಟೀ ಕುಡಿದು ನೋಡಿ!
ನಾನೇನು ತಪ್ಪು ಮಾಡಿರಲಿಲ್ಲ ಆದರೂ ಪಕ್ಷದಿಂದ ಕಿತ್ತು ಹಾಕಿದರು. ಈಗಾಗಲಾದರು ದೊಡ್ಡ ಮನಸ್ಸು ಮಾಡಿ ಶಿವರಾಮೇಗೌಡರಿಗೆ ಅನ್ಯಾಯ ಮಾಡಿಲ್ಲ ಅಂದರೆ ನನ್ನನ್ನೇ ಅಭ್ಯರ್ಥಿ ಮಾದಲಿ. ಅವರೇ ಈಗ ತೀರ್ಮಾನ ತಗೊಂಡು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿ ಎಂದು ಹೇಳಿದರು. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಾದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ ಎಂದರು.