ತುಮಕೂರು : ತುಮಕೂರು ಜಿಲ್ಲೆಯಲ್ಲಿ ಒಂದೇ ದಿನ ಐವರು ಪೊಲೀಸರ ಅಮಾನತ್ತು ಮಾಡಲಾಗಿದ್ದು ಮೂವರು ಪಿಎಸ್ ಐ, ಒಬ್ಬರು ಎಎಸ್ಐ, ಒಬ್ಬರು ಕಾನ್ಸ್ಟೇಬಲ್ ಸೇರಿದಂತೆ ಐವರನ್ನು ಅಮಾನತುಗೊಳಿಸಲು ತುಮಕೂರು ಎಸ್ಪಿ ಅಶೋಕ್ ಕೆ.ವಿ ಅವರಿಂದ ಆದೇಶ ನೀಡಲಾಗಿದೆ.ತುರುವೇಕೆರೆ ಪಿಎಸ್ ಐಗಳಾದ ಗಣೇಶ್, ರಾಮಚಂದ್ರಯ್ಯ ಹೆಡ್ ಕಾನ್ಸಟೇಬಲ್ ರಘುನಂದನ್ ಅಮಾನತು ಆದವರು
ತುರುವೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮಿಸ್ಸಿಂಗ್ ಆಗಿದ್ದರು ಈ ಬಗ್ಗೆ ದೂರು ನೀಡಿದರೂ ಎಫ್ಐಆರ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಅಮಾನತು ಮಧುಗಿರಿ ತಾಲೂಕು ಬಡವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು, ಎಎಸ್ಐ ಸುರೇಶ್ ಅಮಾನತು..
ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ಮಾಡಿದ್ದ ಆರೋಪ ಈ ಬಗ್ಗೆ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಸಂತ್ರಸ್ತರು ಆದರೂ ದೂರು ನೀಡಿದ್ದರೂ ಎಫ್ ಐಆರ್ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದ ಪಿಎಸ್ ಐ ಮತ್ತು ಎಎಸ್ಐ..
ಒಂದೇ ದಿನ ಮೂವರು ಪಿಎಸ್ ಐ, ಒಬ್ಬರು ಎಎಸ್ಐ, ಒಬ್ಬರು ಹೆಡ್ ಕಾನಸ್ಟೇಬಲ್ ಗಳನ್ನ ಅಮಾನತು ಮಾಡಿ ಪೊಲೀಸರಿಗೆ ಚುರುಕು ಮುಟ್ಟಿಸಿದ ಎಸ್ಪಿ.