ಕಲಬುರಗಿ: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮನೆಮುಂದೆ ಇವತ್ತು ಬೆಳ್ಳಂ ಬೆಳಗ್ಗೆ ಜನಾಜಾತ್ರೆ ನೆರೆದಿತ್ತು.
ನಗರದ ಐವಾನ್ ಶಾಹಿ ಏರಿಯಾದ ನಿವಾಸದಲ್ಲಿ ಸಚಿವರಿಗೆ ಭೇಟಿಯಾಗಲು ಜನ ಅಹವಾಲು ಹಿಡಿದು ಬಂದಿದ್ರು.
ನೂಕುನುಗ್ಗಲಿನ ನಡುವೆಯೇ ಅಹವಾಲು ಸ್ವೀಕಾರ ಮಾಡಿದ ಸಚಿವರು ಜನರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಮಾಧ್ಯಮದವರ ಜೊತೆಗೂ ಹಲವು ವಿಷಯಗಳ ಕುರಿತು ಮಾತನಾಡಿದ್ರು