ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 31 ಅಡಿ ನೀರು ಕಡಿಮೆಯಿದ್ದು, ಬೇಸಿಗೆ ಹೊತ್ತಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದು ಕಾಣುವಂತಾಗಿದೆ.
ಇನ್ನು ಉಳಿವ ಒಂದಷ್ಟು ನೀರು ತೀವ್ರ ಬೇಸಿಗೆ ದಿನಗಳಲ್ಲಿ ತೋಟಗಾರಿಕೆ ಬೆಳೆಗಳ ಕಾಪಾಡಿಕೊಳ್ಳಲು ಹರಿಸಬಹುದಾಗಿದ್ದು, ಅಚ್ಚುಕಟ್ಟಿನ ಬೇಸಿಗೆ ಭತ್ತದ ಬೆಳೆಗೆ ಈ ಬಾರಿ ಡ್ಯಾಂನಲ್ಲಿ ನೀರಿಲ್ಲ.
ಬೇಸಿಗೆ ಭತ್ತದ ಹಂಗಾಮಿನಲ್ಲಿ ಭತ್ತ ಬೆಳೆಯಲು 27 ರಿಂದ 28 ಟಿಎಂಸಿ ನೀರು ಬೇಕಾಗುತ್ತದೆ. ಕುಡಿಯುವ ನೀರಿಗೆ ಮೀಸಲಿಟ್ಟ ನೀರು ಸೇರಿಸಿದರೂ ಅಷ್ಟು ಪ್ರಮಾಣದ ನೀರು ಡ್ಯಾಂನಲ್ಲಿಲ್ಲ. ಹಾಗಾಗಿ ಈಗಿರುವ ನೀರನ್ನು ಬೇಸಿಗೆಯಲ್ಲಿ ಕುಡಿವ ನೀರಿಗೆ ಕಾಪಿಡುವುದು ಸೂಕ್ತ
ಬೇಸಿಗೆಯಲ್ಲಿ ತೋಟಗಾರಿಕಾ ಬೆಳೆಗಳ ಉಳಿಸಿಕೊಳ್ಳಲು ನೀರು ಬಿಡಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದರೆ, ಆ ನೀರನ್ನು ಜನವರಿ ತಿಂಗಳ ಕೊನೇ ವಾರ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಹರಿಸಬೇಕು, ತಿಂಗಳಲ್ಲಿ ಕನಿಷ್ಟ 10 ರಿಂದ 15 ದಿನ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.