ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಕಳಸರೋಹಣ ಹಾಗೂ ಲಕ್ಷದೀಪೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಡಿಸೆಂಬರ 18. 12. 2023 ರಂದು ಮುಂಜಾನೆ 9 ಗಂಟೆಗೆ ಶ್ರೀ ವೈಭವ ಚಿತ್ರಮಂದಿರದಿಂದ ಭವ್ಯ ಕಳಸದ ಮೆರವಣಿಗೆ ಕುಂಭಮೇಳ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಪ್ರಾರಂಭಗೊಂಡು ಬನಹಟ್ಟಿಯ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಶ್ರೀ ಕಾಡುಸಿದ್ದೇಶ್ವರ ದೇವಾಲಯಕ್ಕೆ ತಲುಪುವುದು ಮತ್ತು ಮಂಗಳವಾರ ದಿನಾಂಕ 19. 12. 2023 ರಂದು ಶ್ರೀ ಕಾಡಸಿದ್ದೇಶ್ವರ,
ದೇವಾಲಯದಲ್ಲಿ ಕಳಸಾರೋಹಣ ಮತ್ತು ಲಕ್ಷದೀಪೋತ್ಸವ ದೀಪ ಸ್ತಬ್ದ ಪರಮ ಪೂಜ್ಯ ಶ್ರೀ ಜಗದ್ಗುರು ಅದೃಷ್ಟಕಾಡ ಶಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಸಿದ್ದಗಿರಿ ಮಹಾಸಂಸ್ಥಾನ ಮಠ ಕಣೆರಿ ಕೊಲ್ಲಾಪುರ ಇವರ ಅಮೃತ ಹಸ್ತ ಮತ್ತು ವಿವಿಧ ಮಹಾಸ್ವಾಮಿಗಳ ಕೃಪ ಆಶೀರ್ವಾದಗಳೊಂದಿಗೆ ಉದ್ಘಾಟನಾ ಸಮಾರಂಭ ಮತ್ತು,
ಧಾರ್ಮಿಕ ಸಭೆಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಂಗಳವಾರ ಪೇಟ ಹಟಗಾರ ದೈವ ಮಂಡಳಿ, ಚೇರ್ಮಣ್ಣರಾದ ಶ್ರೀಶೈಲ ದಬಾಡಿ ಹೇಳಿದರು. ಇದೇ ಸಂದರ್ಭದಲ್ಲಿ ಶಂಕರ ಸೋರಗಾಂವಿ. ಶ್ರೀಪಾದ ಬಾಣಕಾರ. ಪಂಡಿತ ಪಟ್ಟಣ. ರಾಜಶೇಖರ ಮಾಲಾಪುರ. ಸಿದ್ದನಗೌಡ ಪಾಟೀಲ. ಬಿಮಶಿ ಮಗದುಮ. ದಾನಪ್ಪ ಹುಲಜತ್ತಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ