ಧಾರವಾಡ: ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಭೋವಿ ಕಲ್ಲು, ಬಂಡೆ ಮತ್ತು ಕಟ್ಟಡ ಕಾರ್ಮಿಕರ ವೇದಿಕೆ ವತಿಯಿಂದ ಭ್ರಷ್ಟಾಚಾರ ಮುಕ್ತ, ಕಳಂಕ ರಹಿತ, ಉನ್ನತ ನೀತಿ-ಸಂಸ್ಕಾರ ಸಮಾಜಕ್ಕಾಗಿ ‘ರಾಜ್ಯ ಮಟ್ಟದ ಹೋರಾಟ ಸಭೆ ಮತ್ತು ಸದಸ್ಯ ರ ಮಹಾಜನ ಸಭೆ’ ಹಾಗೂ ‘ಧಾರವಾಡ ಚಲೋ’ ನಗರದಲ್ಲಿ ಆಯೋಜಿಸಲಾಗಿತ್ತು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಯನ್ನು ಚಿತ್ರದುರ್ಗ-ಬಾಗಲಕೋಟೆ ಬೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮನಗುಂಡಿಯ ಬಸವರಾಜ ದೇವರು ನೇರವೇರಿಸಿದರು.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ಭೋವಿ(ವಡ್ಡರ) ಜಾತಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವವರ ಮೇಲೆ ಕ್ರಮವಹಿಸಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ₹2 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕಲ್ಲು, ಬಂಡೆ ಕಸಬು ನಡೆಸುವವರ ಮೇಲೆ ದಾಖಲಾದ ಕೇಸುಗಳನ್ನು ರದ್ದು ಪಡಿಸಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ಕಳಂಕ ರಹಿತ ಅಧ್ಯಕ್ಷರ ನೇಮಿಸಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.