ಹೊಸದುರ್ಗ:- ಕರ್ನಾಟಕದಲ್ಲಿ ಅಕ್ರಮ ಮರಳು ಮಾಫಿಯಾ ರಾಜ ರೋಷವಾಗಿ ನಡೆಯುತ್ತಿದೆ. ಪೊಲೀಸರ ಕಣ್ಣೆದುರೆ ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ ಇದೆಲ್ಲದರ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈವಾಡವಿದ್ದು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಭೂತಾಯಿಯ ಒಡಲನ್ನು ಬರೆದು ಮಾಡಿ ತಮ್ಮ ಬೆಂಬಲಿಗರ ಜೇಬು ತುಂಬಲು ಸಹಕರಿಸುತ್ತಿದ್ದಾರೆ. ಇಷ್ಟು ದೊಡ್ಡ ಹಗರಣ ನೆಡೆಯುತ್ತಿದ್ದರು ಪ್ರಶ್ನೆಸಬೇಕಾದ ಪೊಲೀಸರು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಾ ಮರಳು ಮಾಫಿಯಾ ಜೊತೆ ಕೈಜೋಡಿಸಿ ರುವುದು ವಿಪರ್ಯಾಸ..
ಆದರೆ ಇಲ್ಲೊಬರು ಶಾಸಕಿ ಮರಳು ಮಾಫಿಯಾದ ವಿರುದ್ಧ ತಿರುಗಿ ಬಿದ್ದಿದ್ದು ನಡುರಾತ್ರಿ ತಾವೇ ಖುದ್ದು ಫೀಲ್ಡ್ ಗೆ ಇಳಿದು ಚಳಿ ಬಿಡಿಸಿರುವ ಘಟನೆ ನಡೆದಿದೆ.
ಹೌದು ವೀಕ್ಷಕರೇ ಎಂದಿನಂತೆ ಹೊಸದುರ್ಗ ತಾಲ್ಲೂಕು ನವಿಲುಗುಡ್ಡ ಗ್ರಾಮದಲ್ಲಿ ನಡುರಾತ್ರಿ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿತ್ತು ಆದರೆ ಅವರ ನಸೀಬು ಕೆಟ್ಟಿತ್ತು ಅನ್ಸುತ್ತೆ ದೇವದುರ್ಗ ಶಾಸಕಿ ಕರಿಯಮ್ಮ ಮರಳು ಮಾಫಿಯಾ ಕ್ಕೆ ಬ್ರೇಕ್ ಹಾಕಲು ಕುದ್ದು ತಾವೇ ಫೀಲ್ಡಿಗೆ ಇಳಿದು ಲಾರಿಗಳನ್ನು ಹಿಡಿದು ಸ್ಥಳಕ್ಕೆ ಪೊಲೀಸರನ್ನು ಕರೆಸಿ ಈ ಕೂಡಲೇ ತಪ್ಪಿತಸ್ಥರಿಗೆ ದಂಡ ವಿಧಿಸುವುದರ ಜೊತೆಗೆ ಮರಳು ಮಾಫಿಯಾದ ಹಿಂದೆ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಕ್ ವಾರ್ನಿಂಗ್ ನೀಡಿದ್ದಾರೆ.
ಬಡವರು ಮನೆ ನಿರ್ಮಾಣಕ್ಕೆ ಟ್ರ್ಯಾಕ್ಟರ್ ನಲ್ಲಿ ಮರಳು ಸಾಗಿಸುತ್ತಿದ್ದರೆ ಅಂತವರನ್ನು ಹಿಡಿದು 10000 ದಂಡ ವಿಧಿಸುವ ನೀವು ಅಕ್ರಮವಾಗಿ ಟನ್ಗಟ್ಟಲೆ ಮರಳನ್ನು ಟಿಪ್ಪರ್ ಲಾರಿಗಳಲ್ಲಿ ಸಾಗಿಸುತ್ತಿದ್ದರು ಕ್ರಮ ಕೈಗೊಳ್ಳದಿರುವುದು ಯಾಕೆ ನೀವು ಸರ್ಕಾರಿ ಸಂಬಳ ಪಡೆಯುವುದು ಇಂಥವರಿಗೆ ಶ್ರೀರಕ್ಷೆ ನೀಡಲೇ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಎಂದು ಪಿಎಸ್ಐ ಸುಜಾತ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದರೆ ಇಂಥ ಘಟನೆ ತಾಲೂಕಿನಲ್ಲಿ ನಡೆಯುತ್ತಿರಲಿಲ್ಲ ನಿಮ್ಮ ವಿಫಲತೆಯೇ ಇದಕ್ಕೆ ನೇರ ಕಾರಣ ಮತ್ತೊಮ್ಮೆ ಈ ರೀತಿಯ ಘಟನೆ ನಡೆಯಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಶಾಸಕೀಯ ಈ ನಡೆಗೆ ಕ್ಷೇತ್ರದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ನಡುರಾತ್ರಿ ಮಹಿಳಾ ಶಾಸಕಿ ಒಬ್ಬರು ಈ ಸಾಹಸಕ್ಕೆ ಕೈ ಹಾಕಿದ್ದು ಮಾತ್ರ ಶ್ಲಾಘನೀಯ.