ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್ ದಿನದಿಂದ ದಿನಕ್ಕೆ ಬಿರುಸಿನ ರೂಪ ಪಡೆಯುತ್ತಿದೆ. ಈ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಕೇಸ್ ಸಂಬಂಧ ಆರೋಗ್ಯಾಧಿಕಾರಿಗಳು ಕಠಿಣ ಕ್ರಮವೊಂದನ್ನ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಭ್ರೂಣ ಪತ್ತೆಯಾದ ಕೇಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಚನ್ನಸಂದ್ರದಲ್ಲಿ ಮೊದಲ ಭ್ರೂಣ ಹತ್ಯೆ ಪತ್ತೆಯಾಗಿದ್ದು ಚನ್ನಸಂದ್ರ ಮುಖ್ಯ ರಸ್ತೆ SPG ಆಸ್ಪತ್ರೆಯಲ್ಲಿ 16ರಿಂದ 18ವಾರಗಳ ಭ್ರೂಣ ಪತ್ತೆಯಾಗಿದೆ. ಭ್ರೂಣ ಹತ್ಯೆ ಕೇಸ್ಗೆ ಸಂಬಂಧಿಸಿ ಆರೋಗ್ಯಾಧಿಕಾರಿಗಳು SPG ಆಸ್ಪತ್ರೆಯನ್ನ ಸೀಜ್ ಮಾಡಿದ್ದಾರೆ.
ಇನ್ನು ಪ್ರಕರಣ ಹೊರಬಿದ್ದ ಬೆನ್ನಲ್ಲೇ ಮಾಲೀಕ ಶ್ರೀನಿವಾಸ್ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಚನ್ನಸಂದ್ರದ ಮುಖ್ಯ ರಸ್ತೆಯಲ್ಲಿರೋ SPG ಆಸ್ಪತ್ರೆಯ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರ್ಸ್, ಸಹಾಯಕ ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ಭ್ರೂಣ ಹತ್ಯೆ ಕೇಸ್ ಸದ್ದು ಮಾಡುತ್ತಿದ್ದು ಬೆಳಗಾವಿ ಅದಿವೇಶನದಲ್ಲೂ ಭ್ರೂಣ ಹತ್ಯೆ ಕೇಸ್ ಸಂಚಲನ ಮೂಡಿಸಿತ್ತು. ಈ ಬಗ್ಗೆ ರಾಜ್ಯಾದ್ಯಂತ ಜಿಲ್ಲಾ ಆರೊಗ್ಯ ಇಲಾಖೆ ತಪಾಸಣೆಗೆ ಕೂಡ ಇಳಿದಿದೆ. ಈ ಕೇಸ್ ಪತ್ತೆ ಬೆನ್ನಲ್ಲೇ ಹೊಸಕೋಟೆಯ ಚನ್ನಸಂದ್ರದ SPG ಆಸ್ಪತ್ರೆಯ ಓನರ್ ಡಾ.ಶ್ರೀನಿವಾಸ್ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ರೆಡ್ ಹ್ಯಾಂಡ್ ಆಗಿ ಭ್ರೂಣ ಆಸ್ಪತ್ರೆಯಲ್ಲಿ ಸಿಕ್ಕಿದೆ. ಈ ಬಗ್ಗೆ ಅಧಿಕಾರಿಗಳಿಂದ ತೀವ್ರ ಶೋಧಕಾರ್ಯ ಮುಂದುವರೆದಿದೆ.
ಇನ್ನು ಎಸ್ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನರ್ಸ್, ಸಹಾಯಕ ಸಿಬ್ಬಂದಿ ಸೇರಿದಂತೆ ಮೂವರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಿರುಮಲ ಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಷ್ಟು ಸಮಯದಿಂದ ಭ್ರೂಣ ಹತ್ಯೆ ನಡೆಸ್ತಾ ಇದ್ರೂ ಅನ್ನೋ ಬಗ್ಗೆ ತನಿಖೆ ನಡೆಸಲಾಗ್ತಿದೆ. ಆಸ್ಪತ್ರೆಯನ್ನ ಸೀಜ್ ಮಾಡಿರುವ ಜಿಲ್ಲಾ ಆರೋಗ್ಯ ಇಲಾಖೆ ಮಾಲೀಕ ಶ್ರೀನಿವಾಸ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇನ್ನು ಈ ಆಸ್ಪತ್ರೆ ಬಗ್ಗೆ ಸಿಕ್ಕಿರೋ ಇಂಟರೆಸ್ಟಿಂಗ್ ಮಾಹಿತಿ ಏನಪ್ಪ ಅಂದ್ರೆ ಕಾನೂನು ಬಾಹೀರವಾಗಿ ಕಳೆದ ಎರಡು ಮೂರು ವರ್ಷಗಳಿಂದ ಮಾಲೀಕ ಆಸ್ಪತ್ರೆ ನಡೆಸ್ತಿದ್ದ ಅನ್ನೋದು ಗೊತ್ತಾಗಿದೆ. ಈ ವೇಳೆ ಕಳೆದ ಎರಡು ವರ್ಷಗಳಿಂದಲೂ ಬ್ರೂಣ ಹತ್ಯೆ ಮಾಡ್ತಿರೋ ಶಂಕೆ ವ್ಯಕ್ತವಾಗಿದೆ. ಫೇಕ್ ಡಾಕ್ಟರ್ ಗಳಿಂದ ಬ್ರೂಣ ಹತ್ಯೆ ನಡೀತಿತ್ತು ಎನ್ನಲಾಗಿದೆ.
ಅಸಲಿಗೆ ಎಮ್ ಬಿಬಿಎಸ್ ಓದದ ಡಾಕ್ಟರ್ ಗಳಿಂದ ಆರೋಪಿಗಳು ಆಸ್ಪತ್ರೆ ನಡೆಸ್ತಿದ್ದರು ಅನ್ನೋ ಆಘಾರಕಾರಿ ಮಾಹಿತಿ ಹೊರಬಿದ್ದಿದೆ. ಸರಿಯಾದ ಓದಿಲ್ಲ.. ಎಮ್ ಬಿಬಿಎಸ್ ಮುಗಿಸಿಲ್ಲದಿದ್ದರೂ ಬ್ರೂಣ ಪತ್ತೆ ಮತ್ತು ಹತ್ಯೆಯನ್ನು ಈ ಪಾಪಿಗಳು ಕಲಿತಿದ್ದರು. ಇನ್ನು ಆಸ್ವತ್ರೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಮುಕ್ತಾಯವಾಗಿದ್ದು ಅಧಿಕಾರಿಗಳು ಸಿಬ್ಬಂದಿಯಿಂದ ಹಲವು ದಾಖಲೆಗಳನ್ನು ವಶಪಡಿಸಿಕೊಂಡು ಆಸ್ವತ್ರೆ ಸೀಜ್ ಮಾಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ವತ್ರೆಯ ಪ್ರಮುಖ ಗೇಟ್ ಬಂದ್ ಮಾಡಿ ಸೀಲ್ ಮಾಡಿದ್ದಾರೆ. ಹೊಸಕೋಟೆ ಟಿಹೆಚ್ಒ ವೀಣಾ ನೇತೃತ್ವದಲ್ಲಿ ಆಸ್ವತ್ರೆಗೆ ಬೀಗ ಹಾಕಲಾಗಿದೆ. ಆಸ್ವತ್ರೆಯಲ್ಲಿನ ಸಿಸಿ ಕ್ಯಾಮರಾದ ಡಿವಿಆರ್ ತೆಗೆದುಕೊಂಡು ಹೋಗಲಾಗಿದೆ. ಅಲ್ಲದೇ ಆಸ್ವತ್ರೆ ವಿರುದ್ದ ಲಿಖಿತ ರೂಪದಲ್ಲಿ ಭ್ರೂಣ ಹತ್ಯೆ ಕೇಸ್ ಪ್ರಕರಣವನ್ನ ತಿರುಮಲ ಶೆಟ್ಟಿಹಳ್ಖಿ ಪೊಲೀಸರಿಗೆ ದೂರು ದಾಖಲಾಗಿದೆ.
ಒಟ್ಟಾರೆ ಈ ಭ್ರೂಣ ಹತ್ಯೆ ಕೇಸ್ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಭ್ರೂಣಾವಸ್ಥೆಯಲ್ಲಿರುವಾಗಲೇ ಕಂದಮ್ಮಗಳ ಉಸಿರು ನಿಲ್ಲಿಸುವ ಪಾಪಿಗಳ ಹುಟ್ಟಡಗಿಸಬೇಕಿದೆ.