ಬೆಂಗಳೂರು ಗ್ರಾಮಾಂತರ: ಕೀಳು ಜಾತಿಯವರನ್ನು ಯಾಕೆ ಒಳಗೆ ಬಿಡ್ತೀರಾ !?ಒಲೆಯರು ಹೊಲಸು ಎತ್ತುವುದಕ್ಕೆ ಮಾತ್ರ ಹೊಲೆ ಮುಂಡೆಗಳ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಮಂಟಪ ಗ್ರಾಮ ಪಂಚಾಯಿತಿ ನಡೆದಿದೆ .. ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಕೆ ಪ್ರವೀಣ್ ಕುಮಾರ್ ವಿರುದ್ಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಂಟಪ ಗ್ರಾಮ ಪಂಚಾಯಿತಿಯಲ್ಲಿ ಇದೇ ತಿಂಗಳ 6ನೇ ತಾರೀಕು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ..ಇನ್ನು
ಮಂಟಪ ಗ್ರಾಮ ಪಂಚಾಯಿತಿಯಲ್ಲಿ ಕಸ ನಿರ್ವಹಣೆ ಮಾಡುತ್ತಿದ್ದ ಯಲ್ಲಮ್ಮ ,ಪ್ರೇಮ, ವಿಜಯಮ್ಮ ,ಎಂಬುವವರು
ಎಂಟು ತಿಂಗಳಿಂದ ಕಸ ನಿರ್ವಹಣೆ ಮಾಡುತ್ತಿದ್ದರು.ಎಂಟು ತಿಂಗಳ ಸಂಬಳ ಕೇಳಲು ಈಗಿನ ಅಧ್ಯಕ್ಷರಾಗಿರುವ ಬಿಕೆ ಪ್ರವೀಣ್ ಕುಮಾರ್ ಬಳಿ ಹೋಗಿದ್ದಾಗ ಅಗ ಜಾತಿ ನಿಂದನೆ ಮಾಡಿರುವುದಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದ್ದಾರೆ ಇನ್ನು ಈತನ ವಿರುದ್ಧ ಜಾತಿ ದೌರ್ಜನ್ಯ ಕೇಸ್ ದಾಖಲಾಗಿದೆ ಇನ್ನು ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅಟ್ರಾಸಿಟಿ ಕೇಸ್ ಮಾಡಿದ್ದು ರಾಜಾರೋಷವಾಗಿ ಬಿಕೆ ಪ್ರವೀಣ್ ಕುಮಾರ್ ಓಡಾಡುತ್ತಿದ್ದಾರೆ ಅಂತ ಅನ್ಯಾಯಕ್ಕೆ ಓಳಗಾದ ಮಹಿಳೆಯರು ಆರೋಪ ಮಾಡುತ್ತಿದ್ದಾರೆ..
ಇನ್ನುಮಂಟಪ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತಿದ್ದ ಎಲ್ಲಮ್ಮ ಪ್ರೇಮ ವಿಜಯಮ್ಮ ಉದ್ಯೋಗಿಗಳ ಪಂಚಾಯತಿಯಿಂದಲೇ ಅನುಮತಿ ಪಡೆದು ಕೆಲಸ ನಿರ್ವಹಿಸುತ್ತಿದ್ದರು ಆದ್ರಿಗ ಡಿಕೆ ಪ್ರವೀಣ್ ಕುಮಾರ್ ನಿಮಗೆ ಯಾರು ಕೆಲಸ ಕೊಟ್ಟಿದ್ದರೋ ಅವರತ್ರ ಹೋಗಿ ಕೇಳಿ ಆ ಹೊಲೆಯವ್ರು ಹೊಲಸು ಎತ್ತಕ್ಕೆ ಮಾತ್ರ ನಿಮ್ಮನ್ನ ಒಳಗೆ ಬಿಟ್ಟಿದ್ದು ಯಾರು ಅಂತ ಕಂಪ್ಲೆಂಟ್ ಕಾಫಿಯಲ್ಲಿ ದೂರನ್ನ ಉಲ್ಲೇಖ ಮಾಡಿದ್ದಾರೆ.. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ…