ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನಡೆದವು.
ಕಡೆಯ ಕಾರ್ತಿಕ ಮಾಧ ಪ್ರಯುಕ್ತ ಸೋಮವಾರ ಮಾದಪ್ಪನ ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಮಾದಪ್ಪನ ಮೂರ್ತಿಗೆ ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಡೆಯ ಕಾರ್ತಿಕ ಮಾಸದ ಪ್ರಯುಕ್ತ ಎಲ್ಲೇಲ್ಲೂ ಜನಸಾಗರವೇ ಹರಿಯಿತು.
ಬೆಟ್ಟದ ತುಂಬೆಲ್ಲಾ ಭಕ್ತರ ಉಘೇ ಉಘೆ ಮಾದಪ್ಪ ಎಂಬ ಝೇಂಕಾರ ನಾದ ಮೊಳಗಿತ್ತು. ಭಕ್ತ ಸಾಗರದಿಂದ ಪವಾಡ ಪುರುಷ ಮಾದಪ್ಪನ ಬೆಟ್ಟ ಮುಳುಗಿದೆ.
ಮಲೆಮಹದೇಶ್ವರಬೆಟ್ಟ ಅಭಿವೃದ್ದಿ ಪ್ರಾಧಿಕಾರದಿಂದ ಭಕ್ತರಿಗೆ ಸಕಲ ಸೌಲಭ್ಯ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ.