ಹುಬ್ಬಳ್ಳಿ: ರಾಜ್ಯದ ಎರಡನೇ ‘ದಿ ಆರೋಗ್ಯ ಕೆಫೆ’ ಹುಬ್ಬಳ್ಳಿಯಲ್ಲಿಂದು ಆರಂಭವಾಗಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಹಾಗೂ ಉದ್ಯಮಿ ಬಸಂತಕುಮಾರ ಪಾಟೀಲ್ ರುಚಿ ರುಚಿಯಾದ ಉಪಹಾರ ಸೇವಿಸಿ ಶುಭ ಹಾರೈಸಿದರು.
ತಾಜಾ ಹಾಗೂ ಗುಣಮಟ್ಟದಿಂದ ಗ್ರಾಹಕರನ್ನು ತನ್ನತ್ತ ಸೆಳೆಯಲಿದ್ದು
ಈಗಾಗಲೇ ಬೆಂಗಳೂರಿನಲ್ಲಿ ದಿ ಆರೋಗ್ಯ ಕೆಫೆ ತೆರೆಯಲಾಗಿದ್ದು, ಇಲ್ಲಿನ ತೋಳನಕೆರೆ ಎದುರಿಗೆ ಮತ್ತೊಂದು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಕೆಫೆ ಆರಂಭವಾಗಲಿವೆ.
ತಟ್ಟೆ ಇಡ್ಲಿ, ಘೀ ಪುದಿ ಇಡ್ಲಿ, ಬಟನ್ ಇಡ್ಲಿ, ಓಪನ್ ದೋಸೆ, ಘೀ ಮಸಾಲ ದೋಸೆ, ಘೀ ಗಾರ್ಲಿಕ್ ಮಸಾಲ ದೋಸೆ, ಖಾಲಿ ದೋಸೆ, ಪಡ್ಡು, ಅಕ್ಕಿ ರೊಟ್ಟಿ, ಬಿಸಿ ಬೇಳೆ ಬಾತ್, ಲೆಮನ್ ರೈಸ್, ಪೈನಾಪಲ್ ಕೇಸರಿ ಬಾತ್, ಫಿಲ್ಟರ್ ಕಾಫಿ ಮತ್ತು ಟಿ ಇಲ್ಲಿ ಲಭ್ಯವಿದೆ. ಮನೆಯಲ್ಲಿಯೇ ತಯಾರಿಸಿದ ಮಸಾಲೆಯನ್ನು ಅಡುಗೆಗೆ ಬಳಸಲಾಗುತ್ತಿದೆ ಎಂದು ಮಾಲೀಕರಾದ ಚಂದನ್ ಕುನ್ನೂರ ಹಾಗೂ ಸೂರಜ್ ಅಳವಂಡಿ ತಿಳಿಸಿದರು.
ಮಾಜಿ ಸಂಸದ ಹಾಗೂ ಹಾವೇರಿ ಲೋಕಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಂಜುನಾಥ ಕುನ್ನೂರ, ಗೋವಿಂದರೆಡ್ಡಿ ಅಳವಂಡಿ ಅವರು ಕೆಫೆಯನ್ನು ಉದ್ಘಾಟಿಸಿದರು. ರಾಜು ಕುನ್ನೂರ, ಸತೀಶ ಧವಳಗಿ (ಯುಎಸ್ಎ), ಮಹ್ಮದ್ರಫೀಕ್ ದರ್ಗಾದ, ಅಶೋಕ ಹುರುಳಿ, ರುದ್ರಪ್ಪ ಮೂಲಿಮನಿ, ಗಿರೀಶ ಸುಂಕದ ,ಕಲ್ಮೇಶ ದೇಸಾಯಿ
ಇತರರು ಇತರರು ಇದ್ದರು.