ಕಾಗವಾಡ : ತಾಲೂಕಿನ ಉಗಾರ್ ಶುಗರ್ಸ್ ಕಾರ್ಖಾನೆ ಕಲುಷಿತ ನೀರು ರೈತರ ಹೊಲಗಳಿಗೆ ನುಗ್ಗುತ್ತಿದೆ
ಕಾರ್ಖಾನೆಯ ಹೋಗೆ ಹಾಗು ಡಸ್ಟ್ ನಿಂದ ಜನರ ಬದುಕಿಗೆ ಕಂಟಕವಾಗಿದೆ.
ಕಬ್ಬು ಹಂಗಾಮಿನ ಅವಧಿಯಲ್ಲಿ ಪ್ರತಿ ದಿನ 15000 ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದ ಪ್ರತಿಷ್ಠಿತ ಉಗಾರ್ ಸಕ್ಕರೆ ಖಾರ್ಕಾನೆಯಿಂದ ಕಲುಷಿತ ನೀರಿ ಭೂಮಿಗೆ ಬಿಡುವುದರಿಂದ ಪಕ್ಕದ ಬೋರವೆಲ್ ಬಾವಿಗಳಿಗೆ ಮಿಶ್ರಣವಾಗಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರಿಂದ ಗಂಭೀರ ಆರೋಪ ಕೇಳಿಬಂದಿದೆ.
ಕಲುಷಿತ ವಿಷನೀರು ಸೇವಿಸಿ, ಹಾಗು ಉಸಿರಾಡಲು ಕೂಡ ಶುದ್ಧ ವಾತಾವರಣವಿಲ್ಲದೆ ಜನಜೀವನ ಅಸ್ತವ್ಯಸ್ತವಾಗಿ ಜನರು ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಸಮಸ್ಸೆ ಹೇಳಿಕೊಂಡು ಖಾರ್ಕಾನೆಯ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ .ಇನ್ನು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಖಾರ್ಕಾನೆಗೆ ಹೇಗೆ ಅನುಮತಿ ನೀಡಿದ್ದಾರೆ ! ಪರಿಶೀಲಿಸಿ ಕಾರ್ಖಾನೆಗೆ ನೋಟೀಸ್ ಜಾರಿ ಮಾಡಿಲ್ಲ ಅಂತಾ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.
ಕೂಡಲೆ ತಾಲೂಕಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಾರ್ವಜನಿಕರಿಗೆ ಕಂಟಕಪ್ರಾಯವಾದ ಕಾರ್ಖಾನೆಯಿಂದ ಮುಕ್ತಿ ಗೊಳಿಸುವಂತೆ ಕೇಳಿಕೊಂಡಿದ್ದಾರೆ.