ಧಾರವಾಡ: ತನ್ವೀರ್ ಹಾಸ್ಮಿ ಕುಟುಂಬದ ಜೊತೆಗೆ ಯತ್ನಾಳ ಅವರು ಬ್ಯುಸಿನೆಸ್ ಪಾಟ್ನರಾಗಿದ್ದಾರೆ ಎಂದು ದಾಖಲೆ ಸಮೇತವಾಗಿ ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮಾಟಗಾರವರು ಯತ್ನಾಳ ಅವರಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಯತ್ನಾಳ ಅವರು ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ.
ಸಿದ್ದರಾಮಯ್ಯನವರಿಗೆ ಟ್ವಿಟ್ ಮಾಡಿ ಯಾವುದೇ ವ್ಯವಹಾರವಿಲ್ಲ ಎಂದಿದ್ದಾರೆ. ಅದಕ್ಕೆ ನಾವು ದಾಖಲೆ ಸಮೇತ ಉತ್ತರ ನೀಡುತ್ತಿದ್ದೇವೆ. ವಿಜಯಪುರದ ವಾರ್ಡ ನಂ 3 cts ನಂ 1644/3, 594 ಸ್ಕ್ವಯರ್ ಏರಿಯಾ ಇದೆ. ಎಮ್ ಎಮ್ ಫೀರಜಾದೆ ಹಾಗೂ ಬಸನಗೌಡ ರಾಮನಗೌಡ ಯತ್ನಾಳ ಅವರ ಹೆಸರಿನಲ್ಲಿದೆ. ಇದು ಇತ್ತೀಚಿನ ಉತ್ತಾರವಾಗಿದೆ. ಫೀರಜಾದೆ ಅವರು ತನ್ವೀರ್ ಹಾಸ್ಮಿಯವರ ತಾಯಿ ಅಣ್ಣರಾಗಿದ್ದಾರೆ. ಫೀರಜಾದೆ ಹಾಗೂ ಯತ್ನಾಳ ಅವರು ಆರೋಪ ಮಾಡಿರುವ ತನ್ವೀರ್ ಹಾಸ್ಮಿಯವರಿಗೆ ಮಾಮಾ ಆಗಬೇಕು. ಯತ್ನಾಳವರು ವ್ಯವಹಾರವಿಲ್ಲ ಅಂತಾ ಹೇಳುತ್ತಾರೆ ದಾಖಲೆಗಳು ಸುಳ್ಳು ಹೇಳುವುದಿಲ್ಲ.
ಅದೇ ಜಾಗದಲ್ಲಿ ಈಗ ಟೂರಿಸ್ಟ್ ಹೋಟೆಲ್ ಪಾಟ್ನರಶೀಫ್ನಲ್ಲಿ ನಡೆಯುತ್ತಿದೆ. ರಾಜಕೀಯ ಬೇರೆ ವ್ಯವಹಾರ ಬೇರೆ ಅಂತಾ ಯತ್ನಾಳ ಹೇಳುತ್ತಾರೆ. ಸುಳ್ಳು ಆರೋಪಗಳನ್ನು ಮಾಡುವುದು ಯತ್ನಾಳ ಅವರು ಬೀಡಬೇಕು. ದಾಖಲೆ ಸಮೇತ ಈಗ ನಾವು ಹೇಳಿರುವುದಕ್ಕೆ ಅವರು ಉತ್ತರ ನೀಡಲಿ. ಇಲ್ಲಿ ಮುಸ್ಲಿಂರ ಜೊತೆ ಪಾಟ್ನರಶಿಫ್ನಲ್ಲಿ ಬ್ಯುಸಿನೆಸ್ ಮಾಡುವುದು. ಮತ್ತೆ ಮುಸ್ಲಿಂ ವಿರುದ್ಧ ಮಾತಾಡುವುದರ ಮೂಲಕ ಹಿಂದೂ ಹೋರಾಟಗಾರ ಎಂಬ ಬಿಂಬಿಸಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಯತ್ನಾಳ ಅವರು ಧ್ವನಿ ಎತ್ತಬೇಕು ಎಂದು ಒತ್ತಯ ಮಾಡಿದರು.