ಬೆಂಗಳೂರು:- ಬಿಜೆಪಿ ಶಾಸಕರ ವಿರುದ್ಧ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗುಡುಗಿದ್ದಾರೆ. ಈ ಬಾರಿ ಬಿಜೆಪಿ ಶಾಸಕರಿಗೆ ಸವಾಲು ಎಸೆದು, ವಾಟ್ಸಪ್ ನಲ್ಲಿ ಆಡಿಯೋ ಸ್ಟೇಟಸ್ ಹಾಕಿದ್ದಾರೆ.
ಕಳೆದ ಬಾರಿ ಹೆಡೆಗೇವಾರ್ ಮ್ಯೂಜಿಮ್ ನಲ್ಲಿ ನನಗೆ ಜಾತಿ ಕೇಳಿ ಒಳಗಡೆ ಬೀಡಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದರು. ಅದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್,ಮಾಜಿ ಶಾಸಕ ಪಿ.ರಾಜೀವ್,ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹಾಗೂ ಶಾಸಕ ಸುರೇಶ್ ಕುಮಾರ್ ಬೈದು ಬುದ್ದಿ ಹೇಳಿದ್ರು. ಮತ್ತೆ ವಾಯ್ಸ್ SmS ಸ್ಟೇಟಸ್ ಹಾಕುವ ಮೂಲಕ ಬಿಜೆಪಿ ನಾಯಕರ ಮೇಲೆ ಕಿಡಿಕಾರಿದ್ದಾರೆ.
ಮ್ಯೂಸಿಯಂ ಸಿಸಿಟಿವಿ ಪುಟೇಜ್ ಬಿಡುಗಡೆ ಮಾಡುವಂತೆ ಗೂಳಿಹಟ್ಟಿ ಶೇಖರ್ ಸವಾಲ್ ಹಾಕಿದ್ದಾರೆ. ನಾನೂ ಒಡ್ಡ, ನಾನೂ ಕುಡಿಯುತ್ತೇನೆ. ಹಾಗಂತ ಸುಳ್ಳು ಹೇಳುವುದಿಲ್ಲ.. ನನ್ನ ಸುಳ್ಳು ಅಥವಾ ಸತ್ಯ ಎಂಬುದನ್ನು ಸಾಬೀತುಪಡಿಸಲು ಒಂದೇ ಒಂದು ಪ್ರಶ್ನೆ ಎಂದಿದ್ದಾರೆ. ಹೆಡಗೇವಾರ್ ಮ್ಯೂಜಿಯಂ ನಲ್ಲಿರುವ ಸಿಸಿಟಿವಿ ವಿಡಿಯೋ ತರಿಸಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ. ನನ್ನನ್ನು ಒಳಗಡೆ ಬಿಡದಿರುವ ಸಿಸಿಟಿವಿ ವಿಡಿಯೋ ತೋರಿಸಿ.
ಸುಳ್ಳು ಹೇಳಿದರೆ ನಿಮ್ಮ ಮನೆಗಳಲ್ಲಿ ಜೀತ ಮಾಡ್ತೇನೆ , ನೀವು ಹೇಳಿದ ಕೆಲಸ ಮಾಡಲು ಸಿದ್ಧ ಎಂದು ಆರ್.ಅಶೋಕ್,ಸುರೇಶ್ ಕುಮಾರ್, ಕುಡಚಿ ರಾಜೀವ್ ಗೆ ಸವಾಲ್ ಹಾಕಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಗೆದ್ದು ೩೮ ವರ್ಷಕ್ಕೆ ಮಂತ್ರಿಯಾಗಿದ್ದೇನೆ ಎಂದು ರಾಜೀವ್ ಗೆ ಗೂಳಿಹಟ್ಟಿ ಟಾಂಗ್ ಕೊಟ್ಟಿದ್ದಾರೆ.
ಆರ್ ಎಸ್ ಎಸ್ ಕಚೇರಿಗೆ ಒಳಗೆ ಬಿಟ್ಟುಕೊಳ್ಳದ ವಿಚಾರವನ್ನು ೬ ತಿಂಗಳ ಮೊದಲೇ ತಿಳಿಸಿದ್ರೆ ಚುನಾವಣೆಯಲ್ಲಿ ಇನ್ನೂ ೧೦-೨೦ ಕ್ಷೇತ್ರ ಕಳೆದು ಕೊಳ್ತಿದ್ರೀ ಎಂಬ ಕಾರಣಕ್ಕೆ ಗೂಳಿಹಟ್ಟಿ ಶೇಖರ್ ಸ್ಪಷ್ಟನೆ ನೀಡಿದ್ದಾರೆ.