ಬೆಳಗಾವಿ :-ಜಿಲ್ಲೆಯ ರಾಯಬಾಗ್ ತಾಲೂಕಿನ ಭಾವನ ಸೌದತ್ತಿ ಗ್ರಾಮದ ಯೋಧ ಭೀಮು ಅಶೋಕ್ ಭಾಪ್ಕರ್ 35 ವರ್ಷದ ಅವರು, ಭಾರತಿ ಸೇನೆಯಲ್ಲಿ 67 ಎಂ ಇ ಇ ರೇಜಮೆಂಟ್ನಲ್ಲಿ 15 ವರ್ಷಗಳಿಂದ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದು ಚಂಡಿಗಡದಲ್ಲಿ ಮೃತಪಟ್ಟಿದ್ದಾರೆ.
ಸೇನೆಯಿಂದ ಆಯೋಜಿಸಿದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೇಳೆ ಗಾಯಗೊಂಡಿದ್ದರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದ್ದಾರೆ. ತಂದೆ ತಾಯಿ ಪತ್ನಿ ಪುತ್ರ ಪುತ್ರಿ ಸಹೋದರ ಇದ್ದಾರೆ
ಶನಿವಾರ ಸ್ವಗ್ರಾಮದ ಭಾವನ ಸೌದತ್ತಿ ಪ್ರಾರ್ಥಿವ ಶರೀರ ತರಲಾಗಿದೆ ವೀರ ಯೋಧನ ಅಂತಿಮ ದರ್ಶನ ಪಡೆಯಲು ಗ್ರಾಮದ ಜನರು ಹಾಗೂ ರಾಯಬಾಗ್ ಶಾಸಕ ಡಿ ಎಂ ಐಹೊಳೆ ಅವರು ಕೂಡ ಯೋಧನ ಅಂತಿಮ ದರ್ಶನ ಪಡೆದುಕೊಂಡು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು
ನಂತರ ಮೃತ ಯೋಧನ ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಕ್ರಿಯೆ ನೆರವರಿಸಿದ್ದರು.