ಗೌರಿಬಿದನೂರು:- ಗೆಳೆಯರ ಜೊತೆ ಈಜಾಡಲು ಹೊಗಿ ಸಾವನ್ನಪ್ಪಿರುವ ಘಟನೆ ಗುರುವಾರ ಗೌರಿಬಿದನೂರು ತಾಲ್ಲೂಕಿನ ತೊಂಡೆಭಾವಿ ಗ್ರಾಮದಲ್ಲಿ ನಡೆದಿದೆ.
ಹೌದು ತೊಂಡೆಭಾವಿ ಗ್ರಾಮದ ನಿವಾಸಿ Sslc ವ್ಯಾಸಂಗ ಮಾಡುತಿದ್ದ 16_ವರ್ಷದ ವಯಸ್ಸಿನ ಚರಣ್ ಎಂಬ ಯುವಕ ಗುರುವಾರ ಕನಕ ದಾಸರ ಜಯಂತಿ ಇರುವ ಕಾರಣ ಬೆಳಗ್ಗೆ ಶಾಲೆಗೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ,
ನಂತರ ತನ್ನ ಸ್ನೆಹಿತರ ಜೊತೆ ತಮ್ಮದೆ ಗ್ರಾಮದ ರೈತರ ಹೊಲದಲಿದ್ದ ಕೃಷಿಹೊಂಡ ದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ,
ಸಧ್ಯ ಮಂಚೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ