ರಾಯಚೂರು,ಡಿ.2-ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಸಿಗಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ತೆಲಂಗಾಣದಲ್ಲಿ ಮ್ಯಾಜಿಕ್ ನಂಬರ್ ತಲುಪುತ್ತೇವೆ ಯಾವುದೆ ಆಪರೇಶನ್ ಅಥವಾ ಕುದುರೆ ವ್ಯಾಪಾರ ನಡೆಯುವುದಿಲ್ಲವೆಂದ ಅವರು ಬಿಆರ್ ಎಸ್ ಪಕ್ಷ ನೆಲಕ್ಕಚ್ಚಲಿದೆ ಎಂದರು.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದಿದ್ದರು ಆದರೆ ಈಗ ಬಿಜೆಪಿ ಮುಕ್ತ ದಕ್ಷಿಣ ಭಾರತ ಆಗಲಿದೆ ನಾವು ಆ ರೀತಿ ಹೇಳುವುದಿಲ್ಲ ಕಾಂಗ್ರೆಸ್ ಪಕ್ಷ ಪ್ರಜಾ ಪ್ರಭುತ್ವದಲ್ಲಿ ವಿಶ್ವಾಸವಿಟ್ಟಿದೆ ವಿರೋಧ ಪಕ್ಷಗಳು ಇರಬೇಕು ಎನ್ನುತ್ತೇವೆ ದಮನಕಾರಿ ರಾಜಕಾರಣದಲ್ಲಿ ವಿಶ್ವಾಸವಿರಿಸಿಲ್ಲವೆಂದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ಛತ್ತೀಸಗಡ ಮತ್ತಿತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. ಬೆಂಗಳೂರಿನಲ್ಲಿ ಶಾಲೆಗಳಲ್ಲಿ ಹುಸಿ ಬಾಂಬ್ ಕರೆ ಬಗ್ಗೆ ಗೃಹ ಇಲಾಖೆ ತನಿಖೆ ನಡೆಸಲಿದೆ ಯಾವುದೇ ವೈಫಲ್ಯ ಸರ್ಕಾರದಿಂದ ನಡೆದಿಲ್ಲವೆಂದು ಹೇಳಿದರು.