ಕೋಲಾರ: ನಮ್ಮನ್ನು ಆಳುವ ಸರಕಾರಗಳು ಸಂವಿಧಾನದ ಆಶಯಗಳನ್ನು ನಾಶ ಮಾಡುವ ಜೊತೆಗೆ ಶೋಷಿತರ ಧಮನೀತರ ರಕ್ಷಣೆಗೆ ಇರುವ ಕಾನೂನುಗಳನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎನ್.ಸಿ ಮುನಿಯಪ್ಪ ತಿಳಿಸಿದರು
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ದಲಿತ ಯುವ ಜಾಗೃತಿ ಸಮಿತಿ ವತಿಯಿಂದ ಸಂವಿಧಾನದ ಸಮರ್ಪಣಾ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಇತ್ತಿಚೆಗೆ ಆಯ್ಕೆಯಾದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನವನ್ನು ಒಂದು ವರ್ಗವು ವಿರೋಧಿಸಿಕೊಂಡು ಬಂದಿದ್ದಾರೆ ಅದರ ಹೆಸರಿನಲ್ಲಿ ವಿರೋಧಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಲೇ ಇದೆ ಶಿಕ್ಷಣ ರಾಜಕೀಯ ಸೇರಿದಂತೆ ಬಹುತೇಕ ಕಡೆಯಲ್ಲಿ ತಾರತಮ್ಯವನ್ನು ಕಾಣಬೇಕಾಗಿದೆ ಅಧಿಕಾರಿಗಳು ಸೇರಿದಂತೆ ಮೀಸಲಾತಿಯಿಂದ ಆಯ್ಕೆಯಾದ ಬಹುತೇಕ ಜನಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತದೇ ಇರುವುದೇ ಸಮುದಾಯದಲ್ಲಿ ಇನ್ನೂ ತಾರತಮ್ಯವನ್ನು ಎದುರಿಸಬೇಕಾಗಿದೆ ಇದಕ್ಕೆ ಸರಿಯಾದ ಕಾರಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಎಷ್ಟು ಪ್ರಯೋಜನವನ್ನು ಪಡೆದಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಅಧಿಕಾರವನ್ನು ನಿರ್ವಹಿಸುವ ಸಂದರ್ಭದಲ್ಲಿ ಕಾನೂನು ಮತ್ತು ಹಕ್ಕುಗಳನ್ನು ಜಾರಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು ಸಮಸ್ಯೆಗಳು ಗ್ರಾಮ ಪಂಚಾಯತಿ ಮಟ್ಟದಿಂದಲ್ಲೇ ಹೆಚ್ಚು ಪ್ರಾರಂಭವಾಗಿ ಗ್ರಾಪಂ ಮಟ್ಟದಲ್ಲೇ ಇತ್ಯರ್ಥವಾಗುತ್ತವೆ ಇದಕ್ಕೆ ಜ್ಞಾನ ಮತ್ತು ಅರಿವು ಪಡೆದು ಸಮಸ್ಯೆ ಬಗೆಹರಿಸುವುದು ನಿಮ್ಮಗಳ ಜವಾಬ್ದಾರಿಯಾಗಿದೆ ಎಂದರು.
ಸಂವಿಧಾನ ಬಗ್ಗೆ ಒಂದು ಬಾರಿ ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಅಂಬೇಡ್ಕರ್ ಅವರ ಕನಸು ಎಲ್ಲರಿಗೂ ಶಿಕ್ಷಣ ಉದ್ಯೋಗದ ಸಮಾನ ಅವಕಾಶಗಳು ಸಿಗಬೇಕು ಎಂಬುದು ಆದರೆ ಇದುವರೆಗೂ ಅಂತಹ ಅವಕಾಶಗಳು ಸಿಕ್ಕಿವೆ ಸರಕಾರಗಳು ಬೇರೆ ಬೇರೆ ಸಂಕಷ್ಟದ ಸಮಯದಲ್ಲಿ ವಿಶೇಷ ಅಧಿವೇಶನ ನಡೆಸುತ್ತಾರೆ ಆದರೆ ದಲಿತರ ಬಗ್ಗೆ ಒಂದು ದಿನವಾದರೂ ವಿಶೇಷ ಅಧಿವೇಶನ ಕರೆದು ಚರ್ಚೆ ಮಾಡಿದ್ದಾರಾ ಯೋಜನೆ ಕಾರ್ಯಕ್ರಮಗಳು ಬರೀ ಕಾಗದಲ್ಲಿ ಇದ್ದರೆ ಸಾಲದು ಅನುಷ್ಠಾನ ಮಾಡಬೇಕು ಅವಾಗ ಮಾತ್ರವೇ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಒಂದು ಗೌರವ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ವಿ ಭಾಗ್ಯಲಕ್ಷ್ಮೀ ಮಾತನಾಡಿ ಇವತ್ತಿನ ದಲಿತರ ಸ್ಥಿತಿಗತಿಗಳು ಅಭಿವೃದ್ಧಿ ಬಗ್ಗೆ ಅತ್ಮವಲೋಕನ ಅವಶ್ಯಕತೆ ಇದೆ ಚರಿತ್ರೆಯಲ್ಲಿ ಅವಮಾನವನ್ನು ದಲಿತರು ಪಡೆದಷ್ಟು ಯಾವ ಸಮುದಾಯವು ಪಡೆದಿಲ್ಲ ದಲಿತರಿಗೆ ಮೀಸಲಾತಿ ಮೂಲಕ ರಾಜಕೀಯದ ಕನಸನ್ನು ಅಂಬೇಡ್ಕರ್ ನೀಡಿದ್ದಾರೆ ಸಂವಿಧಾನದ ಆಶಯಗಳು ಎಲ್ಲರಿಗೂ ಅನ್ವಯಿಸುತ್ತದೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಮ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಎನ್ ಮುನಿಸ್ವಾಮಿ ವಹಿಸಿ ಮಾತನಾಡಿ ಅಂಬೇಡ್ಕರ್ ಅವಮಾನಗಳನ್ನು ಅನುಭವಿಸಿ ವಿಶ್ವದ ದೊಡ್ಡ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದರೂ ಸಹ ದೇವರು ಧರ್ಮದ ಹೆಸರಿನಲ್ಲಿ ಕಾನೂನುಗಳನ್ನು ಮಾಡಲು ಹೊರಟಿದ್ದಾರೆ ಸಣ್ಣಪುಟ್ಟ ಕಾರಣಗಳಿಗೆ ಸಾವುನೋವುಗಳನ್ನು ನೋಡಬೇಕಾಗಿದೆ ನಮ್ಮಲ್ಲಿ ಒಗ್ಗಟ್ಟು ನಾಶವಾಗದ ರೀತಿಯಲ್ಲಿ ಎಲ್ಲರಿಗೂ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಸಮಾಜವನ್ನು ಕಟ್ಟಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಲೆಕ್ಕಪರಿಶೋಧಕರ ಡಾ ಗಂಗಾಧರ್ ಮಾತನಾಡಿದರು ದಲಿತ ಯುವ ಜಾಗೃತಿ ಸಮಿತಿ ಸದಸ್ಯರಾದ ವಿ.ಅಂಬರೀಷ್, ಕಲ್ಲೂರು ಚಲಪತಿ, ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಸುಬ್ರಮಣಿ, ಬೆಟ್ಟಹೊಸಪುರ ರವಿ, ನರಸಿಂಹಮೂರ್ತಿ, ಚಂದ್ರಪ್ಪ, ಸೌಮ್ಯ, ಸುಶೀಲಾ ಮುಂತಾದರು ಇದ್ದರು