ನೆಲಮಂಗಲ ;– ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಭೈರನಾಯ್ಕನಹಳ್ಳಿ ನ್ಯಾಯಬೆಲೆ ಅಂಗಡಿಯನ್ನು ಹಸಿರುವಳ್ಳಿಗೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕರಾದ ಡಾ.ಕೆ ಶ್ರೀನಿವಾಸಮೂರ್ತಿ ಅವರು ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದ್ರು ಇನ್ನೂ ತಹಶಿಲ್ದಾರ್ ಕೆ.ಅರುಂಧತಿ ಅವರು ಕೆಲಸದ ಮೇರೆಗೆ ಗೈರಾಗಿದ್ರಿಂದ ಉಪತಹಶಿಲ್ದಾರ್ ಹಾಗೂ ಶಿರಸ್ತೇದಾರ್ ಅವರ ಬಳಿ ಮಾಹಿತಿ ಪಡೆದು ಆಹಾರ ಇಲಾಖೆಯ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ್ರು ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಸುಮಾರು 20-30 ವರ್ಷಗಳಿಂದ ಭೈರನಾಯ್ಕನಹಳ್ಳಿಯಲ್ಲಿ ಆನಂದ್ ಎಂಬುವರು ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದು ಒಂದೇ ದಿನಾಂಕ ಇರುವ ನಕಲಿ ಇ ಸ್ಟಾಂಪ್ ಬಳಸಿ ಹಸಿರುವಳ್ಳಿಗೆ ವರ್ಗಾವಣೆ ಮಾಡಿದ್ದಾರೆ ಇದು ಆನಂದ ಅವರಿಗೆ ಮಾಡಿದ ಅನ್ಯಾಯ ಆಗಿದ್ದು ಸಂಬಂಧಿಸಿದ ಅಧಿಕಾರಿಗಳು ಬೇಗನೇ ವರ್ಗಾವಣೆ ಮಾಡಬೇಕು ಇಲ್ಲವೆ ಅಲ್ಲಿಯವರೆಗೆ ಅದನ್ನು ನಿಲ್ಲಿಸಬೇಕು ಇಲ್ಲವಾದರೇ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.
ವೇಳೆಯಲ್ಲಿ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುನೀಲ್, ಜೆಡಿಎಸ್ ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ನ್ಯಾಯ ಬೆಲೆ ಅಂಗಡಿ ಮಾಲೀಕ ಆನಂದ್.ಜಿ, ಬೈರನಾಯ್ಕನಹಳ್ಳಿ ನಟರಾಜು, ಗ್ರಾ.ಪಂ.ಸದಸ್ಯ ರಾಜಣ್ಣ, ಚಿಕ್ಕನಹಳ್ಳಿ ಕೆಂಪರಾಜು, ಸಿದ್ದರಾಜು, ಬೈರನಾಯ್ಕನಹಳ್ಳಿ ದೇವರಾಜು, ಬಾಬು, ನೆಲಮಂಗಲ ಶ್ರೀನಿವಾಸ್,