ಈ ಹಿಂದೆ ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದರು. ಈಗ ಮರಳಿ ದೊಡ್ಮನೆಗೆ ಬಂದಿದ್ದಾರೆ. ಅವರು ಈವಾರ ಬಿಗ್ ಬಾಸ್ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸೇವ್ ಆದ ಹೊರತಾಗಿಯೂ ಅವರು ಎಲಿಮಿನೇಟ್ ಆಗುತ್ತೇನೆ ಎಂದರು.
ಹಿಂದಿ ಬಿಗ್ ಬಾಸ್ನಲ್ಲಿ ಈ ರೀತಿ ಮಾಡಿದರೆ ದೊಡ್ಡ ದಂಡ ಕಟ್ಟಬೇಕಾಗುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.
ಪ್ರತಿ ವರ್ಷ ವೀಕ್ಷಕರು ಬಿಗ್ ಬಾಸ್ಗಾಗಿ ಕಾಯುತ್ತಾರೆ. 3 ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಜಗಳ ಸಾಮಾನ್ಯ. ಬಿಗ್ ಬಾಸ್ನ ವಿವಾದಾತ್ಮಕ ಶೋ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇದು ಪ್ರಸಾರ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹಿಂದಿಯಲ್ಲಿ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಪ್ರತಿ ಸೀಸನ್ಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.ಅವರು ಸ್ಪರ್ಧಿಗಳ ಜೊತೆ ಕಠಿಣವಾಗಿ ನಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಶೋನಿಂದ ಅರ್ಧಕ್ಕೆ ಹೊರಹೋಗುವ ಪ್ರಯತ್ನ ಮಾಡುತ್ತಾರೆ.
ಬಿಗ್ ಬಾಸ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಸ್ಪರ್ಧಿಗಳನ್ನು ಕಟು ಟೀಕೆ ಮಾಡುತ್ತಾರೆ. ಇದನ್ನು ಸಹಿಸಲಾರದೇ ಅನೇಕ ಸ್ಪರ್ಧಿಗಳು ಕಾರ್ಯಕ್ರಮವನ್ನು ತೊರೆಯಲು ನಿರ್ಧರಿಸುತ್ತಾರೆ. ಬಿಗ್ ಬಾಸ್ ನಿರ್ಧಾರಗಳಿಂದ ಸ್ಪರ್ಧಿಗಳು ತುಂಬಾನೇ ಹತಾಶೆಗೊಳ್ಳುತ್ತಾರೆ. ಆ ಬಳಿಕ ಅರ್ಧಕ್ಕೆ ಹೊರ ನಡೆಯಲು ಅನೇಕ ಸ್ಪರ್ಧಿಗಳು ನಿರ್ಧರಿಸುತ್ತಾರೆ. ಸಲ್ಮಾನ್ ಅವರು ಹಾಕುವ ಕಠೋರ ಛೀಮಾರಿಯೇ ಇದಕ್ಕೆ ಕಾರಣ ಅನ್ನೋದು ಅನೇಕರ ಅಭಿಪ್ರಾಯ. ಈ ರೀತಿ ಹೊರ ಹೋದರೆ ಅವರು ದೊಡ್ಡ ಮೊತ್ತದ ದಂಡಪಾವತಿಸಬೇಕು.
ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ನಡೆಸಿಕೊಡುವವರ ಮಧ್ಯೆ ಒಂದು ಒಪ್ಪಂದ ಆಗಿರುತ್ತದೆ. ಈ ಒಪ್ಪಂದವನ್ನು ಚಾಚೂತಪ್ಪದೇ ಪಾವತಿಸಬೇಕು. ಯಾರ ಮೇಲೂ ಕೈ ಮಾಡುವಂತಿಲ್ಲ, ಬಿಗ್ ಬಾಸ್ನಿಂದ ಅರ್ಧಕ್ಕೆ ಹೊರಬರುವಂತಿಲ್ಲ ಸೇರಿ ಅನೇಕ ನಿಯಮಗಳು ಇದರಲ್ಲಿ ಇವೆ. ಈ ನಿಯಮ ಮೀರಿದರೆ ಎಷ್ಟು ನಷ್ಟ ಆಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮುನ್ನಾವರ್ ಫಾರೂಕಿ ಬಿಗ್ ಬಾಸ್ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ರತಿ ವರ್ಷ ಅನೇಕ ಜನರು ಬಿಗ್ ಬಾಸ್ ಬಾಗಿಲಿಗೆ ಹೋಗಿ ನಾವು ಹೊರಹೋಗಬೇಕು ಎಂದು ಹೇಳುತ್ತಾರೆ. ಹೀಗೆ ಹೋಗಬೇಕಾದ 2 ಕೋಟಿ ರೂಪಾಯಿ ಕೊಡಬೇಕು ಅಂತ ಬಿಗ್ ಬಾಸ್ ಒಪ್ಪಂದದಲ್ಲಿ ಬರೆಯಲಾಗಿದೆ’ ಎಂದಿದ್ದಾರೆ ಮುನ್ನಾವರ್. ಇದು ಅನೇಕರಿಗೆ ಅಚ್ಚರಿ ತರಿಸಿದೆ. ಬಿಗ್ ಬಾಸ್ ಮನೆ ಒಳಗೆ ಬಂದ ನಂತರ ಸ್ಪರ್ಧಿಗಳಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ. ಕೆಲವೊಮ್ಮೆ ಸ್ಪರ್ಧಿಗಳಿಗೆ ಒಂಟಿತನ, ಕುಟುಂಬದ ನೆನಪು ಕಾಡುತ್ತದೆ. ಹೀಗೆ ಕಾಡಿದಾಗ ಸ್ಪರ್ಧಿಗಳು ಹೊರ ನಡೆದರೆ ಶೋ ನಡೆಸಿಕೊಡುವವರಿಗೆ ನಷ್ಟ ಉಂಟಾಗುತ್ತದೆ.