ಹುಬ್ಬಳ್ಳಿ: ಮತಾಂತರ ಮಾಡುವವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು
ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿವೆ ಯಾವ ಹಂತದಲ್ಲಿ ಎಂದರೆಊರು, ಊರು, ಮನೆ ಮನೆಗಳಲ್ಲಿ ಮತಾಂತರ ನಡೆತಾ ಇದ್ದು2-3 ದಿನಗಳಲ್ಲಿ ಎರಡು ಮೂರು ಪ್ರಕರಣ ಬೆಳಕಿಗೆ ಬಂದಿವೆ.
ರಾಜ್ಯದಒಂದು ಚಿಕ್ಕಬಳ್ಳಾಪುರ ಚೌಳೂರಿನಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದ್ದು ಇನ್ನೊಂದು ಚಿತ್ರದುರ್ಗ ಜಿಲ್ಲೆಯಲ್ಲಿಯೂ ಮತಾಂತರ ಮಾಡಲಾಗಿದೆ. ಅಬ್ಬಾಸ್ ಅಂತಾ ಹೆಸರಿನಿಂದ ಮತಾಂತರ ನಡೆಸಲಾಗಿದೆ. ಚಿತ್ರದುರ್ಗದಲ್ಲಿ ಕುರುಬು ಸಮಾಜದ ಯುವಕನನ್ನ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದ್ದು, ಇದೊಂದು ಅಕ್ಷ್ಯಮ್ಯ ಅಪರಾಧ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮವರಿಗೆ ನಾವು ವಾಸಸಲಿಕ್ಕೆ ಕೊಡಲಾಗಿದೆ
ಮತಾಂತರ ಮಾಡಲು ಅಲ್ಲ. ಕಾನೂನು ಉಲ್ಲಂಘನೆ ಮಾಡಿ ಮತಾಂತರ ಮಾಡಲಾಗಿದೆ. ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ದವರು ಸಂಘರ್ಷಕ್ಕೆ ಇಳಿಯುವ ಮನಸ್ಥಿತಿ ಇದೆಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ, ಕ್ರಿಶ್ಚಿಯನ್ ರು ನಾವೇ ಅಧಿಕಾರಕ್ಕೆ ಬಂದ ರೀತಿ ವರ್ತನೆ ಮಾಡತಾ ಇದ್ದಾರೆ
ಲವ್ ಜಿಹಾದಿ ಹಿಂದು ಯುವತಿಯರನ್ನ ಮತಾಂತರ ಮಾಡುವುದು ಅದೇ ರೀತಿ ಯುವಕರನ್ನ ಆಶೆ ಹಚ್ಚಿ ಮತಾಂತರ ನಡೆಸಲಾಗುತ್ತಿದೆ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ನಮ್ಮ ಮನೆ,ಊರು, ಧರ್ಮ ಉಳಿಸುವುದಕ್ಕಾಗಿ ಹೋರಾಟ ಅನಿವಾರ್ಯ ಎಂದರು.