ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ದಿನದಿಂದ ದಿನಕ್ಕೆ ಪೊಲೀಸರು ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದು ಈಗ ಈವರೆಗೆ ಕೃತ್ಯಕ್ಕೆ ಬಳಸಿದ್ದ 9 ವೆಹಿಕಲ್ ಗಳನ್ನ ಪೊಲೀಸರು ಸೀಜ್ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಬಳಿಕ ಶವ ಸಾಗಿಸಲು ವಳಸಿದ್ದ ವಾಹನ ಸೇರಿದಂತೆ ಬೈಕ್ , ಸ್ಕಾರ್ಫೀಯೋ, ಕಾರು ಸೇರಿದಂತೆ 9 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಕಷ್ಟು ಮಂದಿ ಸ್ಥಿತಿವಂತರು ಇದ್ದಾರೆ, ಅವರೆಲ್ಲರ BPL ಕಾರ್ಡ್ ರದ್ದು: ಸಚಿವ ಕೆ.ಹೆಚ್ ಮುನಿಯಪ್ಪ
ಇದೀಗ ಈ ವಾಹನಗಳ ಮಾಲೀಕರು ಯಾರು? ವಾಹನಗಳು ಯಾವ ಹೆಸರಿನಲ್ಲಿವೆ ಎಂದು ಮಾಹಿತಿ ನೀಡುವಂತೆ ಪೊಲೀಸರು RTO ಗೆ ಪತ್ರ ಬರೆದಿದ್ದಾರೆ. ರಾಜಾಜಿನಗರ, ಯಶವಂತಪುರ, ಕೋರಮಂಗಲ, ಇಂದಿರಾನಗರ ಹಾಗೂ ತುಮಕೂರು ಆರ್ ಟಿಓ ಅಧಿಕಾರಿಗಳಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಪತ್ರ ಬರೆದು ಯಾರ ಹೆಸರಲ್ಲಿ ವಾಹನಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡುವಂತೆ ಕೋರಿದ್ದಾರೆ.