ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಇದುವರೆಗೂ ತುಮಕೂರು ಜಿಲ್ಲೆಯಲ್ಲಿ 70 ಲಕ್ಷ ಹಣ ಸೀಜ್ ಮಾಡಲಾಗಿದೆ ಎಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಆಂಧ್ರದಿಂದ ತುಮಕೂರು ಜಿಲ್ಲೆಗೆ ಬರುತ್ತಿದ್ದ 705 ಲೀಟರ್ ಮದ್ಯ ವಶ,
ಇದರಲ್ಲಿ 400 ಲೀಟರ್ ಸಾರಾಯಿ ವಶಕ್ಕೆ ಪಡೆದಿದ್ದೇವೆ. ಐದೂವರೆ ಕೆಜಿ ಗಾಂಜಾ ವಶ ಹಾಗೂ ಗಡಿಯಾರ,ಸೀರೆಗಳು,ಕುಕ್ಕರ್, ಒಡವೆ ಸೇರಿದಂತೆ ಒಟ್ಟು ಆರು ಲಕ್ಷ ಬೆಲೆಬಾಳುವ ಮಾಲ್ ಗಳನ್ನು ಚುನಾವಣೆ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಹೇಳಿದರು.