ಹುಬ್ಬಳ್ಳಿ: ‘ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಧಾರವಾಡ ಜಿಲ್ಲಾ ಘಟಕದಿಂದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ 1ನೇ ಬಸ್ ನಿಲ್ದಾಣ ಬಳಿ ಮಾರ್ಚ್ 3ರಂದು 51 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿ ಮುಖಂಡರವೀಂದ್ರ ಕಲ್ಯಾಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು, ಶ್ರೀಕಾರ ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಆಸಕ್ತರು ತಮ್ಮ ವಯಸ್ಸಿನ ದಾಖಲಾತಿಗಳೊಂದಿಗೆ ಫೆ.25ರೊಳಗೆ ಹೆಸರು ನೋಂದಣಿ ಮಾಡಿಸಬಹುದು. ನೋಂದಣಿಗೆ ಮೊ: 99165 60584, 99455 67573 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಮೇಶ ಕಾಂಬಳೆ,ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಪಾತರದ,
ಉಡಚಪ್ಪ ಕಾಕಣ್ಣವರ, ಸಂತೋಷ ದೊಡಮನಿ, ಮಲ್ಲಿಕಾರ್ಜುನ ಬಿಳಾರ, ಮಲ್ಲಿಕಾರ್ಜುನ ಯಾತಗೇರಿ, ಸಂಗಮೇಶ ದೊಡಮನಿ, ವಿರೂಪಾಕ್ಷ ಚಲವಾದಿ, ಶರಣಪ್ಪ ದೊಡಮನಿ ಇತರರು ಇದ್ದರು.