ಹಾವೇರಿ: ಹಿಂದೂ ಮಹಿಳೆಯರ ರಕ್ಷಣೆಗಾಗಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾಲ್ಕು ಸ್ಥಳಗಳಲ್ಲಿ ಶ್ರೀರಾಮ ಸೇನೆ ಆರಂಭಿಸಿದ ಹೆಲ್ಪ್ಲೈನ್ (ಸಹಾಯ ವಾಣಿ) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನೇಹಾ ಹಿರೇಮಠ ಪ್ರಕರಣದ ಬಳಿಕ ಒಂದೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ಐದು ಪ್ರಕರಣಗಳು ನಡೆದಿವೆ.
ತಕ್ಷಣ ಇದನ್ನು ಶ್ರೀರಾಮ ಸೇನೆ ಗಂಭೀರವಾಗಿ ಪರಿಗಣಿಸಿ ಹೆಲ್ಪ್ ಲೈನ್ ಆರಂಭಿಸಿದ ಮೇಲೆ 300 ಕರೆಗಳು ಬಂದಿವೆ. ಕೊಲೆ ಬೆದರಿಕೆ, ಹೆಲ್ಪ್ಲೈನ್ ಬಂದ್ ಮಾಡುವಂತೆ ಒತ್ತಡ, ಇದರ ಜತೆಗೆ ಲವ್ ಜಿಹಾದ್ನಲ್ಲಿ ಸಿಲುಕಿಕೊಂಡಿರುವ 70 ಸಂತ್ರಸ್ತ ಕುಟುಂಬಗಳ ಕರೆಗಳು ಬಂದಿವೆ. ಕರೆ ಮಾಡಿದವರು ತಮಗಾದ ಸಂಕಷ್ಟ, ಪೊಲೀಸರ ವೈಫಲ್ಯದ ಬಗ್ಗೆ ವಿವರಿಸಿದ್ದಾರೆ’ ಎಂದರು.
Ration Card: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್! BIG ಅಪ್ಡೇಟ್ ಇಲ್ಲಿದೆ
ಹೆಲ್ಪ್ ಲೈನ್ನಲ್ಲಿ ಐದು ಜನರ ತಂಡವಿದೆ. ತಲಾ ಒಬ್ಬ ವೈದ್ಯ, ನ್ಯಾಯವಾದಿ, ಮಹಿಳೆ ಸೇರಿದಂತೆ ಇನ್ನಿಬ್ಬರು ಕೌನ್ಸೆಲಿಂಗ್ ಮಾಡುತ್ತಾರೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಶ್ರೀರಾಮ ಸೇನೆ ಕಾಯಕರ್ತರು ಮಾಡುತ್ತಿದ್ದಾರೆ. ಲವ್ ಜಿಹಾದ್ನಲ್ಲಿ ಸಿಲುಕಿದ ಅನೇಕ ಹಿಂದೂ ಮಹಿಳೆಯರನ್ನು ಶ್ರೀರಾಮ ಸೇನೆ ರಕ್ಷಿಸಿದೆ. ಧಾರವಾಡ ಜಿಲ್ಲೆಯ 50 ವಿದ್ಯಾರ್ಥಿನಿಯರಿಗೆ ತ್ರಿಶೂಲ ದೀಕ್ಷೆ ನೀಡಿದ್ದೇವೆ’ ಎಂದು ಮುತಾಲಿಕ್ ತಿಳಿಸಿದರು.