ಬೆಂಗಳೂರು:- ರಾಜ್ಯ ಸರ್ಕಾರಕ್ಕೆ MB ಪಾಟೀಲ್ ರಿಂದ ಬರೋಬ್ಬರಿ 300 ಕೋಟಿ ನಷ್ಟವಾಗಿದೆ ಎಂದು RTI ಕಾರ್ಯಕರ್ತ ಗಂಭೀರ ಆರೋಪ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್!
ಇಂದು ಸಾಯಂಕಾಲ ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಷಯ ಹಂಚಿಕೊಂಡ ದಿನೇಶ್, ಸಚಿವ ಪಾಟೀಲ್ ತಮ್ಮ ಸುಪರ್ದಿಯಲ್ಲಿ ಬರುವ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿಯ ಸುಮಾರು 100 ಎಕರೆ ಮೂಲೆ ನಿವೇಶನಗಳನ್ನು ಸಾಮಾನ್ಯ ದರದಲ್ಲಿ ಹಂಚಿದ್ದಾರೆ ಎಂದು ಹೇಳಿದರು. ನಿಯಮಗಳ ಪ್ರಕಾರ ಮೂಲೆ ನಿವೇಶನಗಳನ್ನು ಹರಾಜು ಪ್ರಕ್ರಿಯೆ ಮೂಲಕ ಹಂಚಬೇಕು. ಹರಾಜಿನಲ್ಲಿ ಖರೀದಿಸುವ ಪಾರ್ಟಿಗಳ ನಡುವೆ ದರ ಸಮರ ಏರ್ಪಟ್ಟು ಸರ್ಕಾರದ ಬೊಕ್ಕಸದಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ.
ಪಾಟೀಲ್ ಅವರು ಸಾಮಾನ್ಯದರದಲ್ಲಿ ಸಿಎ ಸೈಟುಗಳ ಹಂಚಿಕೆ ಮಾಡಿರುವ ಕಾರಣ ಬೊಕ್ಕಸಕ್ಕೆ ಏನಿಲ್ಲವೆಂದರೂ ₹300 ಕೋಟಿ ನಷ್ಟವಾಗಿದೆಯೆಂದು ದಿನೇಶ್ ಹೇಳಿದ್ದಾರೆ.