ಬೆಂಗಳೂರು:- ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಬೈ ಎಲೆಕ್ಷನ್ ಅಖಾಡ ದಿನದಿಂದ ದಿನಕ್ಕೆ ರಂಗೇರ್ತಿದೆ, 3 ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿ ನಡಿತಿದೆ, ಚನ್ನಪಟ್ಟಣ ಅಖಾಡ ತೀವ್ರ ಕುತೂಹಲ ಕೆರಳಿಸ್ತಿದ್ದು ಮೈತ್ರಿ ಟಕೆಟ್ ರೋಚಕಘಟ್ಟದತ್ತ ಸಾಗ್ತಿದೆ. ಶಿಗ್ಗಾವಿಯಲ್ಲಿ ಕೈ ಮುಸ್ಲೀಂ ದಾಳ ಜೋರಾಗ್ತಿದ್ದು, ಬೊಮ್ಮಾಯಿ ಪುತ್ರನ ಆಯ್ಕೆಯಾಗುತ್ತಾ ಅನ್ನೋದು ಕುತೂಹಲವಾಗ್ತಿದೆ. ಈ ಮಧ್ಯೆ ಸಂಡೂರಿನಲ್ಲಿ ತುಕಾರಾಂ ಕುಟುಂಬಕ್ಕೆ ಟಿಕೆಟ್ ಕೊಡಲು ವಿರೋಧ ಹೆಚ್ಚಾಗ್ತಿದ್ದು ಗಣಿ ಧಣಿಗಳು vs ನಾಗೇಂದ್ರ ಜಿದ್ದಾಜಿದ್ದಿನ ಕಾಳಗ ಜೋರಾಗ್ತಿದೆ…..
ಲೋಕಸಭಾ ಸದಸ್ಯರಿಂದ ತೆರವಾಗಿತುವ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ. ನಾಮಪತ್ರ ಸಲ್ಲಿಕೆಯ ಡೇಟ್ ಹತ್ತಿರವಾಗ್ತಿದ್ದು 3 ಪಕ್ಷಗಳ ಟಿಕೆಟ್ ಫೈಟ್ ಜೋರಾಗ್ತಿದೆ. ಚನ್ನಪಟ್ಟಣ ದಲ್ಲಿ ಮೈತ್ರಿಯ ಟಿಕೆಟ್ ಯಾರಿಗೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾದ್ರೆ, ಡಿಕೆ ಬ್ರದರ್ಸ್ ಯಾವ ಪಾನ್ ಮೂ ಮಾಡ್ತಾರೆ ಅನ್ನೋದು ಕುತೂಹಲವಾಗಿದೆ. ಇನ್ನು ಶಿಗ್ಗಾವಿಯಲ್ಲಿ ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಒಳಿಯುತ್ತಾ ಇಲ್ಲ ಮುರುಗೇಶ್ ನಿರಾಣಿಗೆ ಸಿಗುತ್ತಾ ಅನ್ನೋದು ಕುತೂಹಲವಾದ್ರೆ, ಕೈನಲ್ಲಿ ಮುಸ್ಲೀಂ ಅಸ್ತ್ರ ಜೋರಾಗ್ತಿದೆ. ಈ ಮಧ್ಯೆ ಸಂಡೂರಿನಲ್ಲಿ ಕಾಂಗ್ರೆಸ್ ನಿಂದ ಸಂಸದ ತುಕಾರಾಂ ಪ್ಯಾಮಿಲಿಗೆ ಟಿಕೆಟ್ ಕೊಡಬಾರದು ಅನ್ನೋ ಆಕ್ರೋಶ ಹೆಚ್ಚಾಗ್ತಿದ್ದು, ಈ ಮಧ್ಯೆ ರೆಡ್ಡಿ vs ನಾಗೇಂದ್ರ ವಾಗ್ಯುದ್ಧ ಜೋರಾಗ್ತಿದೆ…..
ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿರೋ ಸಿಪಿ ಯೋಗೇಶ್ವರ್ ಟಿಕೆಟ್ ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಿಪಿವೈಗೆ ಕ್ಷೇತ್ರ ಬಿಟ್ಟುಕೊಟ್ರೆ ಮುಂದೆ ತಮಗೆ ತೊಂದರೆ ಯಾಗುತ್ತೆ ಅನ್ನೋ ಲೆಕ್ಕಾಚಾರ ಮಾಡ್ತಿದ್ದಾರೆ. ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಅವರನ್ನ ಒಪ್ಪಿಸೋ ಕೆಲಸವೂ ನಡಿತಿದ್ದು ನಿಖಿಲ್ ಒಪ್ಪದಿದ್ರೆ ಅಚ್ಚರಿಯ ಅಭ್ಯರ್ಥಿ ಬರಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ
ನಾಳೆ ಬಿಎಸ್ವೈ, ವಿಜಯೇಂದ್ರರೊಂದಿಗೆ ಒಂದು ಚರ್ಚೆ ಮಾಡುವ ಸಾಧ್ಯತೆ ಇದೆ. ಬಳಿಕ ಎನ್ಡಿಎ ಅಭ್ಯರ್ಥಿ ಯಾರು ಎಂಬ ಘೋಷಣೆಯಾಗುತ್ತೆ. ನನ್ನ ಆಸಕ್ತಿ ಪಕ್ಷ ಸಂಘಟನೆಯದ್ದಾಗಿದ್ದು, ರಾಜ್ಯ ಪ್ರವಾಸ ಮಾಡ್ತಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಎನ್ಡಿಎ ಟಿಕೆಟ್ ಕೊಟ್ಟರು ಪಕ್ಷದ ಪರ ನಮ್ಮ ಸಹಕಾರ ಇರುತ್ತೆ ಅಂತ ಯೋಗೇಶ್ವರ್ ಗೆ ಟಾಂಗ್ ಕೊಟ್ಟಿದ್ದಾರೆ ನಿಖಿಲ್….
ಇನ್ನು ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಕುತೂಹಲ ಜೋರಾಗ್ತಿದೆ ಈ ಬಗ್ಗೆ ಮಾತನಾಡಿದ ಡಿಕೆ ಸುರೇಶ್ ಕ್ಯಾಂಡಿಡೇಟ್ ಚುನಾವಣಾ ತಯಾರಿ ಬಗ್ಗೆ ಮಾತನಾಡಿದ್ದೇವೆ. ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ
ವಿಶ್ರಾಂತಿ ತೆಗೆದುಕೊಳ್ಳಿ ಎಂದಿದ್ದಾರೆ ಅಚ್ಚರಿಯ ಅಭ್ಯರ್ಥಿಯನ್ನ ಪಕ್ಷ ಕೊಡಲಿದೆ ಎಂದ್ರೆ. ಡಿಸಿಎಂ ಡಿಕೆ ಶಿವಕುಮಾರ್ ನಾನೇ ಅಭ್ಯರ್ಥಿ ಹಸ್ತದ ಗುರುತು ಸಿದ್ದರಾಮಯ್ಯ ರ ನೇತೃತ್ವ ಎಂದಿದ್ದಾರೆ…
ಇನ್ನು ಶಿಗ್ಗಾವಿ ಬಿಜೆಪಿ ಟಿಕೆಟ್ ಕಾವು ಜೋರಾಗ್ತಿದೆ ಈ ಬಗ್ಗೆ ಮಾತನಾಡಿದ ಅರವಿಂದ ಬೆಲ್ಲದ್ ಬೊಮ್ಮಾಯಿ ಕುಟುಂಬಕ್ಕೆ ಅವಕಾಶ ಕೊಡಬೇಕು ಅನ್ನೋ ಕೂಗಿದೆ. ನನಗಿರೋ ಮಾಹಿತಿ ಪ್ರಕಾರ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆದಿದ್ದಾರೆ.
ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎನ್ನೊ ಮೂಲಕ ಪರೋಕ್ಷವಾಗಿ ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಕೊಡಬೇಕೆಂದಿದ್ದಾರೆ ಬೆಲ್ಲದ್. ಇನ್ನು ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರು ಒಗ್ಗಟ್ಟಿನಿಂದ ಕೇಲಸ ಮಾಡುವುದಾಗಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ನೇತೃತ್ವದಲ್ಲಿ ಸಭೆಯಲ್ಲಿ ತಿಳಿಸಿದ್ದಾರೆ.
ಇನ್ನು ಸಂಡೂರು ಉಪಚುನಾವಣೆಯಲ್ಲಿ ಸಂಸದ ತುಕಾರಾಂ ಕುಟುಂಬಕ್ಕೆ ಟಿಕೆಟ್ ಎನ್ನಲಾಗ್ತಿದ್ದು. ತಮ್ಮ ಪುತ್ರಿ ಸೌಪರ್ಣಿಕಾ ಗೆ ಟಿಕೆಟ್ ಕೊಡ್ತಾರೆ ಅನ್ನೋ ನಿರೀಕ್ಷೆ ಇಟ್ಕೊಂಡಿದ್ದಾರೆ ಸಂಸದರು. ಆದ್ರೆ ಪ್ರಸಕ್ತ ಸನ್ನಿವೇಶದಲ್ಲಿ ತುಕಾರಾಂ ಕುಟುಂಬಕ್ಕೆ ಕೊಡಲು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ vs ಮಾಜಿ ಸಚಿವ ನಾಗೇಂದ್ರ ವಾರ್ ಜೋರಾಗ್ತಿದ್ದು ಸಂಡೂರು ಕ್ಷೇತ್ರ ಗೆಲ್ಲಲು ಶಾಸಕ ಜನಾರ್ದನರೆಡ್ಡಿ ಪಣತೊಟ್ಟಿದ್ದಾರೆ. ಸಂಡೂರಿನಲ್ಲಿಯೇ ಬಾಡಿಗೆ ಮನೆಯ ಗೃಹ ಪ್ರವೇಶ ನೆರವೇರಿಸಿದ ಜನಾರ್ದನರೆಡ್ಡಿ
ಸಂಡೂರಿನಲ್ಲಿ ಬಿಜೆಪಿಯ ಕಮಲ ಅರಳಿಸಲು ಈಗಿನಿಂದಲೇ ಗೇಮ್ ಪ್ಲ್ಯಾನ್ ಆರಂಭಿಸಿದ್ದಾರೆ….
ಒಟ್ನಲ್ಲಿ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಗೆಲ್ಲೋಕೆ ಮೂರು ಪಾರ್ಟಿಗಳಲ್ಲೂ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ನಲ್ಲಿ ಚುನಾವಣಾ ತಯಾರಿ ನಡೆದಿದ್ರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಶುರುವಾಗಿದೆ .ಹಾಗಾಗಿ ಗೆಲ್ಲುವ ಕುದುರೆಗಳನ್ನ ಆಯ್ಕೆಮಾಡೋಕೆ ರಾಜ್ಯ ನಾಯಕರು ಮುಂದಾಗಿದ್ದು ನಾಡಿದ್ದು ಸಭೆ ಕರೆದಿದ್ದಾರೆ. ಬಿಜೆಪಿಯಲ್ಲಿ ಚನ್ನಪಟ್ಟಣ ಬಂಡಾಯದ ಬಾವುಟ ಇಳಿಸುವ ಟೆನ್ಷನ್ ಆದ್ರೆ ಶಿಗ್ಗಾವಿ, ಸಂಡೂರಲ್ಲಿ ಅಭ್ಯರ್ಥಿ ಹುಡುಕಾಟ ನಡಿತಿದೆ. ಸ್ಥಳೀಯ ನಾಯಕರ ಅಭಿಪ್ರಾಯದ ಮೇಲೆ ಅಭ್ಯರ್ಥಿಗಳನ್ನ ಫೈನಲ್ ಮಾಡಲು 3 ಪಕ್ಷಗಳು ತಯಾರಿ ನಡೆಸ್ತಿವೆ…..