ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರರ 23ನೇ ವರ್ಷದ ಜಾತ್ರಾಮಹೋತ್ಸವ ಅದ್ದೂರಿಯಾಗಿ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿವಿಧ ಕಲಾ ತಂಡಗಳಿಂದ ಕುಂಭ ಮೇಳ, ಡೊಳ್ಳು ಮೇಳ, ಕೋಲಾಟ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಕ್ಕಳ ಕೋಲಾಟ ಮೇಳ ನೋಡುಗರನ್ನ ಆಕರ್ಷಿಸುವಂತಿತ್ತು.
ನರಗುಂದ, ನವಲಗುಂದ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಹರಕೆ ಕಟ್ಟಿದ್ರು. ಇನ್ನು ಹರಕೆ ಈಡೇರಿದ ಭಕ್ತಾದಿಗಳು ಹರಕೆ ತೀರಿಸಿ ಕಾಯಿ ಒಡೆದು ಶ್ರೀ ಶರಣಬಸವೇಶ್ವರರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಈಶ್ವರಯ್ಯ ಹಿರೇಮಠ, ಷಣ್ಮುಖಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಫಕ್ಕೀರಗೌಡ್ರ, ಶಂಕರಗೌಡ ಪಾಟೀಲ್,, ಶಿವಾನಂದ ಗಾಣಿಗೇರ, ಈಶಪ್ಪ ಗಾಣಿಗೇರ, ಮಲ್ಲಿಕಾರ್ಜುನ ಗುಂಜಾಳ, ಈರಯ್ಯ ಹಿರೇಮಠ, ರೆಣವ್ವ ಲೋಕುರ, ಶೋಭಾ ಮುಳ್ಳೂರ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.