ಪುಣೆ:- ಪ್ರಧಾನಿ ಮೋದಿ 2 ಭಾರತ ಸೃಷ್ಟಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ ಸೇರಿ ದೇಶದ 4 ರಾಜ್ಯಗಳ ಹಲವೆಡೆ NIA ದಾಳಿ; 11 ಶಂಕಿತ ಉಗ್ರರು ಅರೆಸ್ಟ್!
ಈ ಸಂಬಂಧ ಮಾತನಾಡಿದ ಅವರು,ನರೇಂದ್ರ ಮೋದಿ ಎರಡು ಭಾರತಗಳನ್ನು ಸೃಷ್ಟಿಸುತ್ತಿದ್ದಾರೆ. ಅಲ್ಲಿ ನ್ಯಾಯವೂ ಸಂಪತ್ತಿನ ಮೇಲೆ ಅವಲಂಬಿತವಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿ ಎಕ್ಸ್ನಲ್ಲಿ ವೀಡಿಯೊ ಹೇಳಿಕೆಯನ್ನು ಪ್ರಕಟಿಸಿದ್ದಾರೆ.
ಬಸ್, ಟ್ರಕ್ ಅಥವಾ ಓಲಾ-ಉಬರ್ ಚಾಲಕರು ತಪ್ಪಾಗಿ ಯಾರನ್ನಾದರೂ ರಸ್ತೆ ಅಪಘಾತದಲ್ಲಿ ಕೊಂದರೆ, ಅವರನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸಲಾಗುತ್ತದೆ, ವಾಹನದ ಕೀಯನ್ನು ಕಸಿದುಕೊಳ್ಳಲಾಗುತ್ತದೆ. ಆದರೆ, 16 ವರ್ಷ ವಯಸ್ಸಿನವನು ಪೋರ್ಷೆ ಕಾರನ್ನು ಅಮಲೇರಿದ ಸ್ಥಿತಿಯಲ್ಲಿ ಓಡಿಸಿ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದಾನೆ. ಆದರೂ ಅವನಿಗೆ ಸೂಕ್ತ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಹಿಂದೆ ಪುಣೆಯ ಜುವೆನೈಲ್ ಜಸ್ಟಿಸ್ ಬೋರ್ಡ್ ಇಬ್ಬರು ಜನರನ್ನು ಕೊಂದ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನಿಗೆ ಜಾಮೀನು ನೀಡಿತ್ತು. ಆದರೆ, ಆತನನ್ನು ವಯಸ್ಕ ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಉನ್ನತ ನ್ಯಾಯಾಲಯದ ಅನುಮತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದರು. ಯುವಕನನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು, ಅದು ಕೆಲವೇ ಗಂಟೆಗಳ ನಂತರ ಅವನಿಗೆ ಜಾಮೀನು ನೀಡಿದೆ. ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಸಂಚಾರ ನಿಯಮಗಳ ಬಗ್ಗೆ ಅಧ್ಯಯನ ನಡೆಸಿ 15 ದಿನಗಳೊಳಗೆ ಮಂಡಳಿಗೆ ಪ್ರಸ್ತುತಿ ಸಲ್ಲಿಸುವಂತೆಯೂ ಸೂಚಿಸಿದೆ.