ಬೆಂಗಳೂರು: ಗಣೇಶ ಚತುರ್ಥಿ ಸೇರಿ ದೇಶದ ವಿವಿಧೆಡೆ 14 ದಿನ ಬ್ಯಾಂಕುಗಳಿಗೆ ರಜೆ ಇದ್ದರೆ, ಕರ್ನಾಟಕದಲ್ಲಿ ಎಂಟು ದಿನ ರಜೆಗಳಿವೆ. ಇದರಲ್ಲಿ ಗಣೇಶನ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ರಜೆಗಳೂ ಒಳಗೊಂಡಿವೆ. ಸೆಪ್ಟಂಬರ್ 7ರಂದು ವಿನಾಯಕ ಚತುರ್ಥಿ ಇದ್ದರೆ, ಸೆಪ್ಟಂಬರ್ 16 ಸೋಮವಾರದಂದು ಈದ್ ಮಿಲಾದ್ ಹಬ್ಬಕ್ಕೆ ರಜೆ ಇದೆ.
ಬ್ಯಾಂಕುಗಳಿಗೆ ಯಾವಾಗಲೇ ರಜೆಗಳಿದ್ದರೂ ಬಹುತೇಕ ಬ್ಯಾಂಕಿಂಗ್ ಚಟುವಟಿಕೆಗಳು ನಿರಂತರವಾಗಿ ಲಭ್ಯ ಇರುತ್ತವೆ. ಎಟಿಎಂ ಸೇವೆ ಇದ್ದೇ ಇರುತ್ತದೆ. ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ಗಳು ಸದಾ ಲಭ್ಯ ಇರುತ್ತವೆ. ಯುಪಿಐ ಮೂಲಕವೂ ಹಣದ ವಹಿವಾಟು ನಡೆಸಬಹುದು.
ಸೆಪ್ಟಂಬರ್ 14ರಿಂದ 16ರವರೆಗೆ ಸತತ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಬ್ಯಾಂಕ್ ರಜಾ ದಿನಗಳಿವೆ.
- ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
- ಸೆಪ್ಟಂಬರ್ 8: ಭಾನುವಾರದ ರಜೆ
- ಸೆಪ್ಟಂಬರ್ 14: ಎರಡನೇ ಶನಿವಾರ
- ಸೆಪ್ಟಂಬರ್ 15: ಭಾನುವಾರದ ರಜೆ
- ಸೆಪ್ಟಂಬರ್ 16, ಸೋಮವಾರ: ಈದ್ ಮಿಲಾದ್
- ಸೆಪ್ಟಂಬರ್ 22: ಭಾನುವಾರದ ರಜೆ
- ಸೆಪ್ಟಂಬರ್ 28: ನಾಲ್ಕನೇ ಶನಿವಾರ
- ಸೆಪ್ಟಂಬರ್ 29: ಭಾನುವಾರದ ರಜೆ
ಅಕ್ಟೋಬರ್, ನವೆಂಬರ್, ಡಿಸೆಂಬರ್ನಲ್ಲಿರುವ ರಜಾದಿನಗಳು
- ಅ. 1, ಮಂಗಳವಾರ: ಬ್ಯಾಂಕ್ ಖಾತೆಗಳ ಅರ್ಧವಾರ್ಷಿಕ ಮುಕ್ತಾಯ
- ಅ. 2, ಬುಧವಾರ: ಗಾಂಧಿ ಜಯಂತಿ
- ಅ. 11, ಶುಕ್ರವಾರ: ಆಯುಧ ಪೂಜೆ, ಸರಸ್ವತಿ ಪೂಜೆ
- ಅ. 21, ಗುರುವಾರ: ದೀಪಾವಳಿ
- ನ. 1, ಶುಕ್ರವಾರ: ಕನ್ನಡ ರಾಜ್ಯೋತ್ಸವ
- ನ. 2, ಶನಿವಾರ: ಗೋವರ್ಧನ ಪೂಜೆ
- ನ. 18, ಸೋಮವಾರ: ಕನಕದಾಸ ಜಯಂತಿ
- ಡಿ. 25, ಬುಧವಾರ: ಕ್ರಿಸ್ಮಸ್ ಹಬ್ಬ
- ಡಿ. 31, ಮಂಗಳವಾರ: ಹೊಸ ವರ್ಷದ ಪ್ರಯುಕ್ತ