ತುಮಕೂರು: ನಾನು ಲೋಕಸಭಾ ಚುನಾವಣೆಯಲ್ಲಿಗೆದ್ದ 100 ದಿನದೂಳಗೆ ಕೇಂದ್ರದಿಂದ ಕಲ್ಪತರು ನಾಡಿಗೆ 10 ಸಾವಿರ ಕೋಟಿ ರೂ. ಅನುಧಾನ ತರುವೆ. ರಾಯದುರ್ಗ ರೈಲ್ವೆ ಕಾಮಗಾರಿ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗೆ ಮರುಚಾಲನೆ ನೀಡುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭರವಸೆ ನೀಡಿದರು.
Ration Card: ಇಂದಿನಿಂದ ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ..! ಇಂತವರಿಗೆ ಮಾತ್ರ ಅವಕಾಶ
ಮಾತನಾಡಿದ ಅವರು, ” ಕೇಂದ್ರ ಸರ್ಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ ಹೈಟೆಕ್ ಆಸ್ಪತ್ರೆ ತಂದೇ ತರುತ್ತೇನೆ. ಇದು ಕೇವಲ ಭರವಸೆಯಲ್ಲ, ಬಡಜನರ ನೋವಿನ ಮನವಿ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಿದ್ದು, ಸಿದ್ಧರಬೆಟ್ಟ ಮತ್ತು ಏಳು ಸುತ್ತಿನ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ” ಹೇಳಿದರು.