ಬೆಂಗಳೂರು:- 22 ಬ್ಯಾಂಕ್ನಲ್ಲಿ ಬರೋಬ್ಬರಿ ಹತ್ತು ಕೋಟಿ ಲೋನ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಫ್ಯಾಮಿಲಿಯ 6 ಮಂದಿ ಅರೆಸ್ಟ್ ಮಾಡಲಾಗಿದೆ.
ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ: HDK ಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ !
ನಾಗೇಶ್ ಭಾರದ್ವಾಜ್ ,ಬಿ ಎಸ್ ಸುಮಾ, ಸತೀಶ್, ವೇದಾ, ಆರ್ ವಿ ಶೇಷಗಿರಿ, ಆರ್ಎಸ್ ಶೋಭಾ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬೇಗೂರಿನಲ್ಲಿ ನಿವಾಸವಿದೆ ಎಂದು ನಂಬಿಸಿ ಅದರ ಮೇಲೆ ಲೋನ್ ಪಡೆಯಲಾಗಿತ್ತು, ಈ ಕುರಿತು ಜಯನಗರ ಪೊಲೀಸ್ ಠಾಣೆ ಯಲ್ಲಿ 2022 ರಲ್ಲಿ ಕೇಸ್ ಕೂಡ ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆರೋಪಿಗಳು ನಾಪತ್ತೆಯಾಗಿದ್ದರು. ಸಹಕಾರಿ ಬ್ಯಾಂಕ್, ರಾಷ್ಟೀಕೃತ ಬ್ಯಾಂಕ್, ಕೋ ಅಪರೇಟಿವ್ ಬ್ಯಾಂಕ್ ಸೇರಿ ಹಲವಾರು ಕಡೆಗಳಲ್ಲಿ ಬೇಗೂರಿನಲ್ಲಿ 2100 ಅಡಿ ವಿಸ್ತೀರ್ಣದಲ್ಲಿ ನಮ್ಮ ಕಟ್ಟಡ ಇದೆ ಎಂದು ನಂಬಿಸಿದ್ದರು. ಜೊತೆಗೆ ಅದಕ್ಕೆ ಬೇಕಾದ ದಾಖಲಾತಿಗಳನ್ನು ಕೂಡ ಸೃಷ್ಟಿಸಿ, ಅದನ್ನು ಕುಟುಂಬದ ಬೇರೆ ಬೇರೆ ವ್ಯಕ್ತಿಗಳ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದರು. ನಂತರ ಅದಕ್ಕೆ ಬೇಕಾದ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು 2014 ರಿಂದ 2015ರ ಅವಧಿಯಲ್ಲಿ ವಂಚನೆ ಮಾಡಿದ್ದರು. ಅಷ್ಟೇ ಅಲ್ಲ, ಪಡೆದ ಲೋನ್ ಹಣದಲ್ಲಿ ಒಂದು ಸೈಟ್ ಕೂಡ ಪಡೆದುಕೊಂಡಿದ್ದರು. ಸದ್ಯ ಅದನ್ನು ಕೇಸ್ನಲ್ಲಿ ಅಟ್ಯಾಚ್ ಮಾಡಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)