ಶಿವಮೊಗ್ಗ: ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಸ್ಥಿತಿ ಭೀಷ್ಮನಂತಿದೆ. ಕುರುಕ್ಷೇತ್ರ ಯುದ್ಧ ಮಾತ್ರ ಮಾಡಬೇಕು. ಪಟ್ಟಕ್ಕೆ ಕೂರುವ ಹಾಗಿಲ್ಲ. ಅದರ ಯಶ ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಬಾಣಗಳನ್ನೂ ಬಿಟ್ಟು ಅವರಿಗೆ ಘಾಸಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಡಿಯೂರಪ್ಪ ಅವರ ಅಪ್ಪಟ ಶಿಷ್ಯ. ಅವರಿಗಾದ ಅನ್ಯಾಯದ ಬಗ್ಗೆ ನನಗೆ ನೋವಿದೆ. ವಿಪರ್ಯಾಸವೆಂದರೆ ಅವರ ಪುತ್ರರಿಗೆ ಈ ವಿಚಾರ ಬೇಕಾಗಿಲ್ಲ ಎನಿಸುತ್ತದೆ. ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆದರೆ ಚುನಾವಣೆ ವೇಳೆಯಲ್ಲಿಅವರೇ ಪ್ರಚಾರ, ಬರ ಅಧ್ಯಯನಕ್ಕೂ ಬೇಕು. ಹಾಗಾದರೆ ಈಗ ಅವರಿಗೆ ವಯಸ್ಸಾಗಿಲ್ಲವೆ? ಪಾಪ ಹಿರಿಜೀವವನ್ನು ಬಿಜೆಪಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದರು.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಇನ್ನು ಬಿಜೆಪಿಯ ಬರ ಅಧ್ಯಯನದ ಬಗ್ಗೆ ಟೀಕೆ ಮಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬರ ಅಧ್ಯಯನ ಮಾಡುತ್ತಿರುವುದೇ ಒಂದು ವಿಡಂಬನೆ. ಈಗಾಗಲೇ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದೆ. ವೈಜ್ಞಾನಿಕ ಅಂಕಿ ಅಂಶಗಳನ್ನು ಸಲ್ಲಿಸಿದೆ. ರಾಜ್ಯ ಸರಕಾರ ಸಹ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಘೋಷಿಸಿಯಾಗಿದೆ. ಹೀಗಿರುವಾಗ, ಈಗ ಬಿಜೆಪಿ ಬರ ಅಧ್ಯಯನ ಮಾಡುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.