ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ ಕುಮಾರಸ್ವಾಮಿ ಬೆಂಬಲ ನೀಡುತ್ತಾರೆಂದು ಹೃದಯದಿಂದ ಹೇಳಿಲ್ಲ, ಅವರ ತುಟಿಯಿಂದ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಎರಡು ರೀತಿಯ ಕೆಲಸ ಮಾಡುತ್ತಾರೆ. ಒಂದು ಮೆದುಳಿನಿಂದ, ಮತ್ತೊಂದು ಹೃದಯದಿಂದ. ಹಾಗಾಗಿ ಹೃದಯದಿಂದ ಮಾಡೋ ಕೆಲಸ ಸತ್ಯ, ಮೆದುಳಿನಿಂದ ಮಾಡೋ ಕೆಲಸ ಅಸತ್ಯ.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಹೀಗಿರುವಾಗ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಸಂಬಂಧ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅವರ ಸಂಬಂಧದ ಬಗ್ಗೆ ಕುಮಾರಸ್ವಾಮಿ ಅವರ ತಂದೆಯವರ ಕಾಲದಿಂದಲೂ ನಾಡಿನ ಜನರಿಗೆ ಗೊತ್ತಿದೆ ಎಂದರು. ಈಗಾಗಲೇ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್’ಗೆ ಬೆಂಬಲ ಕೊಡತ್ತಾರೆ ಎಂದು ಹೇಳಲು ಆಗುವುದಿಲ್ಲ. ಕುಮಾರಸ್ವಾಮಿ ಹೃದಯದಿಂದ ಆ ಮಾತನ್ನು ಹೇಳಿಲ್ಲ ಎಂದು ತಿಳಿಸಿದ ಅವರು, ಕುಮಾರಸ್ವಾಮಿ ಅವರು ದುಬೈಗೆ ಹೋಗಿ ಬಂದ ನಂತರ ಹೇಳಿಕೆ ಬದಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.