ಹುಬ್ಬಳ್ಳಿ:ಬಿಜೆಪಿ ಸರ್ಕಾರದ ವಿರುದ್ದ 40% ಭ್ರಷ್ಟಾಚಾರದ ಆರೋಪ ಬಂದಾಗ ಈಡಿ, ಸಿಬಿಐ ಎಲ್ಲಿದ್ದವು ಎಂದು ಕಾಂಗ್ರೆಸ್ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಪ್ರಶ್ನೆ ಮಾಡಿದರು.
ಮಳೆಗಾಲದಲ್ಲಿ ಚರ್ಮದ ಸಮಸ್ಯೆ ಕಾಡ್ತಿದ್ಯಾ!?, ಚಿಂತೆ ಬಿಡಿ ಈ ಟ್ರಿಕ್ಸ್ ಫಾಲೋ ಮಾಡಿ!
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು 40 ಪರ್ಸೆಂಟ್ ಸರ್ಕಾರ ಎಂದು ಕುಖ್ಯಾತಿ ಹೊಂದಿದ್ದ ಬಿಜೆಪಿಯ ನಾಯಕರು ಮಾಡುವ ಅರೋಪಗಳಿಗೆ ಹುರುಳಿಲ್ಲ, ಅದು 40 ಪರ್ಸೆಂಟ್ ಸರ್ಕಾರ ಅಂತ ಹೇಳಿದ್ದು ಕಾಂಗ್ರೆಸ್ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೇಳಿದ ಮಾತಿದು ಎಂದರು. ಕೆಂಪಣ್ಣ ಅವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿರುವುದಕ್ಕೆ ಏನಾದರೂ ದಾಖಲೆಯಿದೆಯಾ ಎಂದು ಪ್ರಶ್ನಿಸಿದ ನಲಪಾಡ್, ಬಿಜೆಪಿ ಸರ್ಕಾರದ ವಿರುದ್ಧ ಅರೋಪಗಳು ಬಂದಾಗ ಬಸವರಾಜ ಬೊಮ್ಮಾಯಿ, ಅರ್ ಅಶೋಕ್, ವಿಜಯೇಂದ್ರ ಮೊದಲಾದವರೆಲ್ಲ ಎಲ್ಲಿದ್ದರು? ಎಂದು ಕೇಳಿದರು.
ಬಿಎಸ್ ಯಡಿಯೂರಪ್ಪನವರು ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಡಿನೋಟಿಫೈ ಪ್ರಕರಣದಲ್ಲಿ ಜೈಲಿಗೆ ಹೊಗಿದ್ದರು ಎಂದು ನಲಪಾಡ್ ಹೇಳಿದಾಗ ಅವರ ಪಕ್ಕದಲ್ಲಿದ್ದವರೊಬ್ಬರು ಅವರದ್ದೇ ಸರ್ಕಾರದಲ್ಲಿದ್ದಾಗ ಅಂತ ತಿದ್ದುತ್ತಾರೆ! ಯಡಿಯೂರಪ್ಪ, ವಿಜಯೇಂದ್ರ ಮೊದಲಾದವರೆಲ್ಲ ಸತ್ಯ ಹರಿಶ್ಚಂದ್ರನ ವಂಶತಸ್ಥರೇ ಎನ್ನುವ ನಲಪಾಡ್ ಬಿಜೆಪಿ ನಾಯಕರ ವಿರುದ್ಧ ಆರೋಪಗಳು ಕೇಳಿ ಬಂದಾಗ ಈಡಿ, ಸಿಬಿಐ ಮೊದಲಾದ ಏಜೆನ್ಸಿಗಳು ನಿದ್ದೆ ಮಾಡುತ್ತಿದ್ದವೇ ಎಂದರು.