ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಕಳೆದ ಎರಡು ಕಂತಿನ ಹಣ ಯಾವಾಗ ಎಂಬ ಪ್ರಶ್ನೆ ಮಹಿಳೆಯರಲ್ಲಿ ಮೂಡಿದ್ದು ಈ ಕುರಿತು ಸಚಿವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಆರೋಗ್ಯ ಕವಚ ಸಿಬ್ಬಂದಿ ಗೋಳು ಕೆಳೋರಿಲ್ಲ: ಪಾವತಿಯಾಗದ 7 ತಿಂಗಳ ಸಂಬಳ – ಸಿಬ್ಬಂದಿಯ ಬದುಕು ಅತಂತ್ರ
ಹೌದು ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವ ಮುಂಚಿತವಾಗಿ ಗೃಹ ಲಕ್ಷ್ಮೀ ಯೋಜನೆ ಕಂತು ಮಹಿಳೆಯರ ಅಕೌಂಟ್ ಗೆ ಜಮೆ ಮಾಡಲಾಗಿತ್ತು. ನಂತರ ಎರಡು ತಿಂಗಳು ಅವಧಿಯ ಚುನಾವಣೆ ನಂತರ ಈವರೆಗೂ ಕೆಲವರಿಗೆ ಹಣ ಬಂದಿಲ್ಲ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದ್ದು. ನಾವು ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮೀ ಯೋಜನೆ ನಿಲ್ಲಿಸಲ್ಲ. ಸಧ್ಯದಲ್ಲೇ ಬಾಕಿ ಕಂತಿನ ಹಣವನ್ನು ಮಹಿಳೆಯರ ಅಕೌಂಟ್ ಗೆ ಜಮೆ ಮಾಡುವ ಭರವಸೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಈ ಬಾರಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುವಲ್ಲಿ ಒಂದು ತಿಂಗಳು ತಡವಾಗಿರಬಹುದು. ಆದರೆ ಯೋಜನೆ ಸ್ಥಗಿತ ಮಾಡಲ್ಲ. ಬರುವ ದಿನಗಳಲ್ಲಿ ಹಣ ಬಿಡುಗಡೆ ಮಾಡುವ ಭರವಸೆಯನ್ನು ಸಚಿವೆ ಹೆಬ್ಬಾಳಕರ್ ನೀಡಿದ್ದಾರೆ.