ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ.
ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ಹೊರಟಿದ್ದಾರೆ: ಬಿ.ವೈ.ವಿಜಯೆಂದ್ರ
ಸುನಿತಾ ವಿಲಿಯಮ್ಸ್ ಅವರು ಅಂತಿಮವಾಗಿ ಭೂಮಿಗೆ ಬಂದು ಇಳಿದಿದ್ದಾರೆ, ಈ ಮೂಲಕ ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ಬಂಧನ ಅಂತ್ಯವಾಗಿದೆ. ಸುನಿತಾ ವಿಲಿಯಮ್ಸ್ ಅಭಿಮಾನಿ ಬಳಗ ಕುಣಿದಾಡಿದ್ದು, ಅತ್ಯಂತ ಸುರಕ್ಷಿತವಾಗಿ ನಾಸಾ ಸಂಸ್ಥೆಯ ಪ್ಲಾನ್ ಪ್ರಕಾರವೇ ಎಲ್ಲಾ ನಡೆದು ಹೋಗಿದೆ. ಸುನಿತಾ ವಿಲಿಯಮ್ಸ್ ಸೇರಿದಂತೆ ಮತ್ತಿತರರು ಕೂತಿದ್ದ ಬಾಹ್ಯಾಕಾಶದ ನೌಕೆ ಭೂಮಿಗೆ ಹತ್ತಿರ ಆಗುತ್ತಿದ್ದಂತೆ ಭಯ ಕೂಡ ಹೆಚ್ಚಾಗಿತ್ತು. ಏಕೆಂದರೆ ಭೂಮಿ ಗುರುತ್ವದ ಜೊತೆಗೆ ಸಂಘರ್ಷ ಹೆಚ್ಚಾಗಿ ಬೆಂಕಿ ಹೊತ್ತಿಕೊಳ್ಳುವ ಭಯ ಕಾಡಿತ್ತು.
ಇವರ ಆಗಮನ ಕೇವಲ ಅಮೆರಿಕಕ್ಕೆ ಮಾತ್ರವಲ್ಲ ಭಾರತಕ್ಕೂ ಸಂತಸ ತಂದಿದೆ. ಹಾಗಾದ್ರೆ ಸುನಿತಾ ವಿಲಿಯಮ್ಸ್ಗೂ ಭಾರತಕ್ಕೂ ಇರುವ ನಂಟೇನು? ಎನ್ನುವುದನ್ನು ನೋಡೋದಾದರೆ,
ಇದು ಸುನಿತಾ ಅವರ ಮೂರನೇ ಬಾಹ್ಯಾಕಾಶ ಪ್ರಯಾಣವಾಗಿದ್ದು, ಇದಕ್ಕೂ ಮೊದಲು ಅವರು 2006 ಮತ್ತು 2012 ರಲ್ಲಿ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದರು. ಸುನಿತಾ ವಿಲಿಯಮ್ಸ್ ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್ನಲ್ಲಿ ಜನಿಸಿದರು.
ಅವರ ತಂದೆ ಡಾ. ದೀಪಕ್ ಪಾಂಡ್ಯ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಗ್ರಾಮದ ನಿವಾಸಿ. ಅವರು 1957 ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದರು ಮತ್ತು ಅಲ್ಲಿ ಉರ್ಸುಲಿನ್ ಬೋನಿ ಅವರನ್ನು ವಿವಾಹವಾದರು. ಕಲ್ಪನಾ ಚಾವ್ಲಾ ನಂತರ, ನಾಸಾ ಮೂಲಕ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತ ಮೂಲದ ಮಹಿಳೆ ಸುನಿತಾ
ಸುನಿತಾ ವಿಲಿಯಮ್ಸ್ ಭೂಮಿಗೆ ಮರಳುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ. ನೀವು ಮೈಲುಗಳಷ್ಟು ದೂರದಲ್ಲಿದ್ದರೂ, ನಮ್ಮ ಹೃದಯಗಳಿಗೆ ತುಂಬಾ ಹತ್ತಿರವಾಗಿದ್ದೀರಿ ಎಂದು ಅವರು ಬರೆದಿದ್ದಾರೆ.
ಗಾಂಧಿನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಜುಲಾಸನ್ ಗ್ರಾಮದಲ್ಲಿ ಸುನಿತಾ ವಿಲಿಯಮ್ಸ್ ಅವರು ಆಳವಾದ ಸಂಪರ್ಕ ಹೊಂದಿದ್ದಾರೆ. ಸುಮಾರು 7,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಸುನಿತಾ ಈ ಗ್ರಾಮಕ್ಕೆ ಎರಡು ಬಾರಿ ಬಂದಿದ್ದರು, ಮೊದಲು 2007 ರಲ್ಲಿ ಮತ್ತು ನಂತರ 2013 ರಲ್ಲಿ, ಅವರ ಯಶಸ್ವಿ ಬಾಹ್ಯಾಕಾಶ ಯಾನದ ನಂತರ, ಸುನಿತಾ ಅವರ ಗ್ರಾಮಕ್ಕೆ ಭೇಟಿ ನೀಡಿದ್ದರು
ಗಾಂಧಿನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಜುಲಾಸನ್ ಗ್ರಾಮದಲ್ಲಿ ಸುನಿತಾ ವಿಲಿಯಮ್ಸ್ ಅವರು ಆಳವಾದ ಸಂಪರ್ಕ ಹೊಂದಿದ್ದಾರೆ. ಸುಮಾರು 7,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಸುನಿತಾ ಈ ಗ್ರಾಮಕ್ಕೆ ಎರಡು ಬಾರಿ ಬಂದಿದ್ದರು, ಮೊದಲು 2007 ರಲ್ಲಿ ಮತ್ತು ನಂತರ 2013 ರಲ್ಲಿ, ಅವರ ಯಶಸ್ವಿ ಬಾಹ್ಯಾಕಾಶ ಯಾನದ ನಂತರ, ಸುನಿತಾ ಅವರ ಗ್ರಾಮಕ್ಕೆ ಭೇಟಿ ನೀಡಿದ್ದರು.