ವಿಜಯಪುರ: ಇತ್ತೀಚೆಗೆ ಕೊಳವೆ ಬಾವಿಗೆ ಬಿದ್ದು ಪವಾಡದಂತೆ ಸಾವಿನ ಮನೆಯಿಂದ ಪಾರಾಗಿ ಬಂದ ಸಾತ್ವಿಕ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.
ಅದರಂತೆ ಪುಟ್ಟ ಕಂದ ಸಾತ್ವಿಕ್ ಕೈಯಲ್ಲಿ ಬೆತ್ತ ಹಿಡಿದು ಗತ್ತಿನ ಹೆಜ್ಜೆ ಹಾಕಿದ್ದ. ಅಲ್ಲದೇ ನಾಯಿ ಜೊತೆ ಸಾತ್ವಿಕ್ ತುಂಟಾಟದ ವಿಡಿಯೋ ಕೂಡ ಸೆರೆಯಾಗಿದೆ. ಸಾತ್ವಿಕ ನೋಡಲು ಲಚ್ಯಾಣದ ತೋಟದ ಮನೆಗೆ ಬೇರೆ ಕಡೆ ಗ್ರಾಮಸ್ಥರು ಬರುತ್ತಿದ್ದು, ಮಗು ನೋಡಿ ಖುಷಿ ಪಡುತ್ತಿದ್ದಾರೆ. ಪವಾಡದಂತೆ ಸಾವಿನ ಮನೆಯಿಂದ ಪಾರಾಗಿ ಬಂದ ಸಾತ್ವಿಕ ನೋಡಲು ಜನ ಅಗಮಿಸುತ್ತಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
MP Election: ಇಂದು ಹಾವೇರಿ ಕ್ಷೇತ್ರಕ್ಕೆ ಬಿವೈ ವಿಜಯೇಂದ್ರ ಎಂಟ್ರಿ! – ಬೊಮ್ಮಾಯಿ ಪರ ಅಬ್ಬರದ ಪ್ರಚಾರ!
ಇನ್ನೂ ಇತ್ತೀಚೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ ಸಾತ್ವಿಕ್ ಬಿದ್ದಿದ್ದ. 20 ಗಂಟೆಗಳ ಕಾಲ ಬೋರ್ ವೆಲ್ ನಲ್ಲಿ ಸಾತ್ವಿಕ್ ಸಿಲುಕಿದ್ದ. NDRF, SDRF ಅಗ್ನಿಶಾಮಕ ದಳ ಪೊಲೀಸರ ಯಶಸ್ವಿ ಕಾರ್ಯಾಚರಣೆ ಯಲ್ಲಿ ಸಾತ್ವಿಕ ಸಾವಿನಿಂದ ಪಾರಾಗಿ ಬಂದ.
ಈಗ ಸಾತ್ವಿಕ್ ನೋಡಲು ಬೇರೆ ಬೇರೆ ಕಡೆಗಳಿಂದ ಜನ ಬರುತ್ತಿದ್ದಾರೆ. ಮನೆಯ ಮುಂದೆ ಕುರ್ಚಿ, ಕುಡಿಯುವ ನೀರು ನೆಲ ಹಾಸಿಗೆ ಹಾಕಿ ಗ್ರಾಮಸ್ಥರಿಂದ ಸತ್ಕಾರದ ವ್ಯವಸ್ಥೆ ಮಾಡಲಾಗಿದೆ. ಸಾತ್ವಿಕ ಹೆಸರು ಬದಲಿಗೆ ಸಿದ್ಧಲಿಂಗ ಮಹರಾಜ ಎಂದು ಜನ ಕರೆಯುತ್ತಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)